ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

ಬೆಂಗಳೂರು: ನಮ್ಮನ್ನು ಹೋಗು ಅನ್ನೋದಿಕೆ ನೀನ್ಯಾರು ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕಿದ ಪುಂಡನಿಗೆ ಪಿಎಸ್‍ಐ ನಡುರಸ್ತೆಯಲ್ಲೇ ಡಿಚ್ಚಿ ಹೊಡೆದು ಬೆದರಿಸಿದ ಘಟನೆ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ನಡೆದಿದೆ.

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಗ್ಲುಷನ್ ಶಾಧೀ ಮಾಲ್ ಕಮಿಟಿಗೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಗಲಾಟೆ ನಡೆದಿದೆ. ಎಲೆಕ್ಷನ್ ಮುಗಿದ ಬಳಿಕ ಸಾರ್ವಜನಿಕರಿಗೆ ಇಲ್ಲಿಂದ ಹೋಗುವಂತೆ ಇನ್ಸ್‌ಪೆಕ್ಟರ್‌ ನಾಗರಾಜು ಸೂಚನೆ ನೀಡಿದ್ದಾರೆ.

ಆಗ ಅಲ್ಲಿದ್ದ ಕೆಲ ಪುಂಡರು, ನಮ್ಮನ್ನು ಹೋಗೂ ಅನ್ನೋಕೆ ನೀನ್ಯಾರು ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಜೊತೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೇ ಜಗಳವು ತಾರಕಕ್ಕೇರಿ ಪೊಲೀಸರು ಮತ್ತು ಸಾರ್ವಜನಿಕರು ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿತ್ತು.

ಈ ವೇಳೆ ಎಂಟ್ರಿಯಾದ ಪಿಎಸ್‍ಐ ಕಿರಣ್, ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕುತ್ತಿದ್ದ ಆ ಪುಂಡನಿಗೆ ಡಿಚ್ಚಿ ಹೊಡೆದು ಬೆದರಿಸಿದ್ದಾರೆ. ತಕ್ಷಣ ಪೊಲೀಸರು ಮತ್ತು ಮುಸ್ಲಿಂ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *