ಪಾದ್ರಿ ಪರ, ವಿರೋಧ ಗಲಾಟೆ – ಕೋಲಾರ ಚರ್ಚ್‌ಗೆ ಬಿಗಿ ಬಂದೋಬಸ್ತ್‌

ಕೋಲಾರ : ಮೆಥೋಡಿಸ್ಟ್ ಚರ್ಚ್‌ನಲ್ಲಿನ ಗಲಾಟೆಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇಂದು ಚರ್ಚ್‌ ಬಳಿ ಪಾದ್ರಿ ಶಾಂತಕುಮಾರ್ ಅವರ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಪ್ರತಿಭಟನೆ ನಡೆಯಿತು.

ಕೋಲಾರ ನಗರದ ಹಳೇ ಬಸ್ ನಿಲ್ದಾಣದ ಬಳಿ ಇರುವ ಚರ್ಚ್ ಪಾದ್ರಿ ಶಾಂತಕುಮಾರ್ ಮೇಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಅವರು ಪಾದ್ರಿ ಸ್ಥಾನ ನಿರ್ವಹಿಸಲು ಅನರ್ಹರು ಅವರು ಯಾವುದೇ ಕಾರಣಕ್ಕೂ ಪ್ರಾರ್ಥನಾ ಸಭೆಗಳನ್ನು ನಡೆಸಬಾರದು ಎಂದು ಒಂದು ಗುಂಪು ಆಗ್ರಹಿಸಿ ಪ್ರತಿಭಟನೆ ಮಾಡಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿ ಆಟದಲ್ಲಿ 16 ರನ್‌ಗಳ ಜಯ – ಸರಣಿ ಗೆದ್ದ ಟೀಂ ಇಂಡಿಯಾ

ಆದರೂ ಒಂದು ಗುಂಪು ಶಾಂತಕುಮಾರ್ ಅವರನ್ನು ಎಂದಿನಂತೆ ಚರ್ಚ್ ಒಳಗೆ ಹೋಗಲು ಅನುಮತಿ ನೀಡಿತು. ಈ ಕಾರಣಕ್ಕೆ ವಿರೋಧಿ ಗುಂಪಿನ ಸದಸ್ಯರು ಚರ್ಚ್ ಹೊರಗೆ ಮರದ ಕೆಳಗೆ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಮತ್ತೊಂದು ಗುಂಪು ಅವರು ತಪ್ಪು ಮಾಡಿಲ್ಲ ಎಂದಿನಂತೆ ಪ್ರಾರ್ಥನಾ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದರು.

ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಚರ್ಚ್ ಬಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *