ಬಲೆಗೆ ಸಿಲುಕಿದ್ದ ನಾಗರ ಹಾವಿನ ರಕ್ಷಣೆ

ಉಡುಪಿ: ಬಲೆಯಲ್ಲಿ ಸಿಲುಕಿದ್ದ ನಾಗರಹಾವೊಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಡುಹೊಳೆ ಗ್ರಾಮದಲ್ಲಿ ನಡೆದಿದೆ.

ಕಾರ್ಕಳದ ಹೆಬ್ರಿ ಸಮೀಪದ ಕಾಡುಹೊಳೆಯ ನಿವಾಸಿ ಜಿನ್ನಪ್ಪ ಎಂಬುವರ ಮನೆಯಲ್ಲಿ ನಾಗರ ಹಾವೊಂದು ಬಲೆಗೆ ಸಿಲುಕಿಕೊಂಡಿದ್ದು, ಆದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಉಡುಪಿಯ ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಗುರುರಾಜ್ ಸನಿಲ್ ಸ್ಥಳಕ್ಕೆ ಭೇಟಿ ನೀಡಿ ನಾಗರ ಹಾವನ್ನು ಬಹಳ ಶ್ರಮವಹಿಸಿ ಬಿಡಿಸಿದ್ದಾರೆ. ನಾಗರಹಾವು ದೈಹಿಕವಾಗಿ ಬಹಳ ಮೃದು ಆಗಿರುವುದರಿಂದ ಹಾವಿಗೆ ಘಾಸಿಯಾಗದಂತೆ ಒಂದೊಂದೇ ಬಲೆಯ ಕಣಗಳನ್ನು ಕತ್ತರಿಸಿ ಹಾವನ್ನು ರಕ್ಷಣೆ ಮಾಡಿದ್ದಾರೆ. ಸ್ಥಳೀಯರೂ ಕೂಡ ಹಾವನ್ನು ಬಿಡಿಸಲು ಸಹಾಯ ಮಾಡಿದ್ದಾರೆ.

ನಾಗರಹಾವಿನ ಹೆಡೆಯ ಭಾಗವನ್ನು ಬಿಡಿಸುವ ಸಂದರ್ಭದಲ್ಲಿ ಬಹಳ ಪ್ರಾಯಾಸಪಡಬೇಕಾಗಿ ಬಂತು. ಸುಮಾರು ಒಂದು ಗಂಟೆಗಳ ಕಾಲ ಗುರುರಾಜ್ ಸನಿಲ್ ಶ್ರಮವಹಿಸಿ ಹಾವಿನ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *