ಮಠದ ಆಸ್ತಿ ವಿವಾದ-ಸ್ವಾಮೀಜಿ ಪುತ್ರನ ಕೊಲೆ

ಬಾಗಲಕೋಟೆ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯೊಬ್ಬರ ಮಗನ ಮೇಲೆ ಮಾರಕಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಚಿಕ್ಕಯ್ಯ ಮಠದ (32) ಎಂದು ಗುರುತಿಸಲಾಗಿದೆ. ಚಿಕ್ಕಯ್ಯ ಜಮಖಂಡಿ ತಾಲೂಕಿನ ಬಸವಗೋಪಾಲ ನೀಲಮಾಣಿಕ್ಯ ಮಠದ ಸ್ವಾಮೀಜಿ ದಾನೇಶ್ವರ ಎಂಬವರ ಪುತ್ರರಾಗಿದ್ದಾರೆ.

ಚಿಕ್ಕಯ್ಯ ದಾನೇಶ್ವರ ಸ್ವಾಮೀಜಿಯವರ ಮೊದಲನೇ ಪತ್ನಿಯ ಮಗನಾಗಿದ್ದು, ಮಠದ ಆಸ್ತಿ ವಿಚಾರವಾಗಿ ಸ್ವಾಮೀಜಿ ಹಾಗೂ ಮಗನ ನಡುವೆ ಕಲಹವಿತ್ತು ಎಂದು ತಿಳಿದು ಬಂದಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿಯೇ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆಯೇ ಇದೇ ವಿಚಾರವಾಗಿ ಚಿಕ್ಕಯ್ಯ ಅವರ ಮೇಲೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಲ್ಲೊಳ್ಳಿ ಗ್ರಾಮದ ಬಳಿ ದಾಳಿ ಮಾಡಿ ಹಲ್ಲೆ ನಡೆಸಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಬೇಟಿ ನೀಡಿ ಪರೀಶಿಲನೆಯನ್ನು ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *