ಶೂ ತೆಗೆದುಕೊಂಡು ಹೋಗೋದಕ್ಕೂ ಬೇಕು ಬಂಟರು- ಬೆಳಗಾವಿಯಲ್ಲಿ ಗೋವಾಕ್ಕೆ ನೀರು ಬಿಟ್ಟ ಅಧಿಕಾರಿಗಳ ದರ್ಪ

ಬೆಳಗಾವಿ: ನೀರಾವರಿ ಅಧಿಕಾರಿಯೊಬ್ಬರು ದರ್ಪ ತೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರು ತಮ್ಮ ಚಾಲಕನ ಕೈಯಲ್ಲಿ ಶೂ ತೆಗೆದುಕೊಂಡು ಹೋಗುವಂತೆ ಹೇಳೋ ಮೂಲಕ ದರ್ಪ ತೋರಿಸಿದ್ದಾರೆ.

ಮಲಪ್ರಭೆ ನೀರು ಕಳಸಾಗೆ ಸೇರಿ ಗೋವಾ ಪಾಲಾಗುತ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಈ ದರ್ಪ ತೋರಿದ್ದಾರೆ. ಅಧಿಕಾರಿ ಭೇಟಿ ನೀಡುವ ಸ್ಥಳ ಕೆಸರಿನಿಂದ ತುಂಬಿತ್ತು. ಹೀಗಾಗಿ ಶೂ ಕಳಚಿದ ಅಧಿಕಾರಿ ಶೂ ಕಳಚಿ ತಮ್ಮ ಚಾಲಕ ಗಣಪತಿ ಮದ್ಲಿಗೆ ನೀಡಿದ್ದಾರೆ. ಆ ಬಳಿಕ ಚಾಲಕ ಅಧಿಕಾರಿಯ ಶೂ ಹಿಡಿದುಕೊಂಡು ಹೋಗಿದ್ದು, ಈ ಮೂಲಕ ಅಧಿಕಾರಿಯ ಶೂ ಸೇಫ್ ಆಗಿದೆ.

 

 

Comments

Leave a Reply

Your email address will not be published. Required fields are marked *