ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ

ಬೆಂಗಳೂರು: ಮಹಿಳೆಯರಿಗೆ ಚಿನ್ನದ ಅಭರಣಗಳೆಂದರೆ ಅಚ್ಚುಮೆಚ್ಚು. ಮದುವೆ, ಸಮಾರಂಭಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವನ್ನು ಮಹಿಳೆಯರು ನೀಡುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೇ ನಟಿ ಮಣಿಯರು ಚಿನ್ನದ ಆಭರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದೀಗ ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿ ಪ್ರಿಯಾಂಕಾ ಉಪೇಂದ್ರ ಆಯ್ಕೆ ಆಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ದೇಶದ ಅತಿಡೊಡ್ಡ, ಅತ್ಯುತ್ತಮ ಅಭರಣ ಪ್ರದರ್ಶನ ಮತ್ತು ಮಾರಟ ಮೇಳ ನಡೆಯುತ್ತಿದೆ. ಜ್ಯುವೆಲ್ಸ್ ಆಫ್ ಇಂಡಿಯಾದವರು ಇದೇ ತಿಂಗಳು 15ರಿಂದ 18ನೇ ತಾರೀಖಿನವರಗೆ ಆಯೋಜಿಸಿದ್ದಾರೆ. ಜುವೆಲ್ಸ್ ಆಫ್ ಇಂಡಿಯಾದ ಪ್ರಚಾರದ ರಾಯಭಾರಿಯಾಗಿರುವ ಖ್ಯಾತ ಚಲನಚಿತ್ರ ನಟಿ ಪ್ರಿಯಾಂಕ ಉಪೇಂದ್ರರವರು ಸುದ್ದಿಗೋಷ್ಠಿ ನಡೆಸಿದರು.

 

View this post on Instagram

 

A post shared by priyanka upendra (@priyanka_upendra)

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅಭರಣಗಳೆಂದರೆ ಅಚ್ಚುಮೆಚ್ಚು. ಭಾರತೀಯ ಪಾರಂಪಾರಿಕ ಶೈಲಿಯ ಮತ್ತು ದೆಹಲಿ, ಮುಂಬೈ, ಗುಜರಾತ್, ರಾಜಸ್ಥಾನ್ ವಿವಿಧ ರಾಜ್ಯದ ಅಭರಣ ಪ್ರದರ್ಶನ ಮತ್ತು ಮಾರಾಟ ನಾಲ್ಕು ದಿನಗಳ ಕಾಲ ನಡೆಯುತ್ತದೆ ಎಂದರು.

ಜುವೆಲ್ಸ್ ಆಫ್ ಇಂಡಿಯಾ ಪ್ರಚಾರ ರಾಯಭಾರಿ ಎರಡು ಸಲ ಆಯ್ಕೆಯಾಗಿದ್ದೇನೆ. ಕಳೆದ 20 ತಿಂಗಳಿಂದ ಕೊರೊನಾ ಕಾಲದಿಂದ ಮಹಿಳೆಯರು ಅಭರಣ ಖರೀದಿಸಲು ಆಗಿಲ್ಲ. ದೀಪಾವಳಿ ಹಬ್ಬವು ಹತ್ತಿರ ಬರುತ್ತಿದೆ, ಅದ್ದರಿಂದ ಜುವೆಲ್ಸ್ ಆಫ್ ಇಂಡಿಯಾ ವತಿಯಿಂದ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ ಬನ್ನಿ ಆಗಮಿಸಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *