ತುಮಕೂರಿನಲ್ಲಿ ಬೇಕರಿಯೊಳಗೆ ನುಗ್ಗಿದ ಖಾಸಗಿ ಬಸ್: ಇಬ್ಬರ ದುರ್ಮರಣ

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಬೇಕರಿಯೊಳಗೆ ನುಗ್ಗಿದ ಪರಿಣಾಮ ಇಬ್ಬರು ಸಾವನಪ್ಪಿ ಮೂವರು ಗಾಯಗೊಂಡ ಘಟನೆ ನಡೆದಿದೆ.

ಕೊರಟಗೆರೆ ತಾಲೂಕಿನ ಕೋಳಾಲ ವೃತ್ತದಲ್ಲಿ ಈ ದುರಂತ ಸಂಭವಿಸಿದೆ. ಬನಶಂಕರಿ ಬೇಕರಿ ಮಾಲೀಕ ಕುಮಾರ್ ಹಾಗೂ ಬಸ್ ಗಾಗಿ ಕಾಯುತಿದ್ದ ಲಕ್ಷಮ್ಮ ಎಂಬ ಮಹಿಳೆ ಸಾವನಪ್ಪಿದ್ದಾರೆ.

ಎಸ್ ಎಲ್ ಎನ್ ಬಸ್, ಕೊರಟಗೆರೆಯಿಂದ ಬೆಂಗಳೂರು ಕಡೆಗೆ ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಬೇಕರಿ ಒಳಗೆ ನುಗ್ಗಿದೆ. ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ರೆ, ಬೇಕರಿ ಮಾಲೀಕ ಕುಮಾರ್ ಬೆಂಗಳೂರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾನೆ. ಉಳಿದಂತೆ ಚಾಲಕ ಸೇರಿ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದೆ.

ಈ ಸಂಬಂಧ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *