ಮೈಸೂರಿನಲ್ಲಿ ದಸರಾಗೆ ತಯಾರಿ: ಇಂದಿನಿಂದ ಅರ್ಜುನನಿಗೆ ಮರದ ಅಂಬಾರಿ ಹೊರುವ ತಾಲೀಮು

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ತಾಲೀಮು ಜೋರಿದೆ.

ಇಷ್ಟು ದಿನ ಮಣ್ಣಿನ ಮೂಟೆಗಳನ್ನು ಬೆನ್ನ ಮೇಲೆ ಹೊತ್ತು ತಾಲೀಮು ನಡೆಸುತ್ತಿದ್ದ ಅರ್ಜುನನಿಗೆ ಇವತ್ತಿನಿಂದ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಯಿತು. 750 ಕೆಜಿ ಚಿನ್ನದ ಅಂಬಾರಿ ಹೊತ್ತು ಅರ್ಜುನ ಸಾಗಬೇಕಿರುವ ಕಾರಣ ಇವತ್ತಿನಿಂದ 250 ಕೆಜಿ ತೂಕದ ಮರದ ಅಂಬಾರಿ ಹಾಗೂ 500 ಕೆಜಿ ತೂಕದ ಮರಳಿನ ಮೂಟೆಗಳನ್ನು ಅರ್ಜನನ ಬೆನ್ನಿಗೆ ಕಟ್ಟಿ ತಾಲೀಮು ಶುರು ಮಾಡಲಾಯಿತು.

ಮೈಸೂರು ಅರಮನೆ ಆವರಣದಲ್ಲಿ ಅರ್ಜುನನ ಬೆನ್ನಿಗೆ ಮರದ ಅಂಬಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟಿದರು. ಡಿಸಿಎಫ್ ಏಡುಕುಂಡಲ, ಆನೆ ವೈದ್ಯ ಡಾ.ನಾಗರಾಜ್ ಮರದ ಅಂಬಾರಿಗೆ ಪೂಜೆ ಸಲ್ಲಿಸಿದರು. ಮರದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅರ್ಜುನನಿಗೆ ಕುಮ್ಕಿ ಆನೆಗಳಾದ ವಿಜಯ, ವರಲಕ್ಷ್ಮಿ ಸಾಥ್ ನೀಡಿದವು.

Comments

Leave a Reply

Your email address will not be published. Required fields are marked *