ರಾಮದಾಸ್ ಕಚೇರಿಗೆ ಬಂದ ಪ್ರೇಮಕುಮಾರಿಯಿಂದ ಅವಾಂತರ

ಮೈಸೂರು: ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ಮೈಸೂರಿನ ಚಾಮುಂಡಿಪುರಂನಲ್ಲಿನ ಕಚೇರಿಗೆ ಪ್ರೇಮಕುಮಾರಿ ತಮ್ಮ ತಾಯಿ ಜೊತೆ ಆಗಮಿಸಿ ಅವಾಂತರ ಸೃಷ್ಟಿಸಿದ್ದಾರೆ.

ಕಚೇರಿಗೆ ಆಗಮಿಸಿದ ಪ್ರೇಮಕುಮಾರಿ, ನಾನು ರಾಮದಾಸ್ ಅವರನ್ನು ಈ ಕ್ಷಣವೇ ನೋಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆಗ ಕಚೇರಿಯಲ್ಲಿ ಹೈ ಡ್ರಾಮ ನಡೆದಿದೆ. ಈ ಬಗ್ಗೆ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಕಚೇರಿಗೆ ಕೆ.ಆರ್. ಠಾಣೆಯ ಪೊಲೀಸರು ಆಗಮಿಸಿದ್ದು, ಹೀಗೆ ಶಾಸಕರ ಕಚೇರಿಗೆ ನುಗ್ಗಿ ಗಲಾಟೆ ಮಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಬಗೆಹರಿಸಿ ಕೊಳ್ಳಿ ಎಂದು ಹೇಳಿ ಕಚೇರಿಯಿಂದ ಹೊರ ಕಳುಹಿಸಿದ್ದಾರೆ.

Comments

Leave a Reply

Your email address will not be published. Required fields are marked *