ಬಿಜೆಪಿ ಜನ ಸುರಕ್ಷಾ ಯಾತ್ರೆಯಲ್ಲಿ ಸಿಲುಕಿದ ಗರ್ಭಿಣಿ – ಪೊಲೀಸರ ವಿರುದ್ಧ ಜನಾಕ್ರೋಶ

ಉಡುಪಿ: ಬಿಜೆಪಿ ಜನ ಸುರಕ್ಷಾ ಯಾತ್ರೆ ಕುಂದಾಪುರಕ್ಕೆ ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಕುಂದಾಪುರ ಮುಖ್ಯ ಪೇಟೆಯ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಪೊಲೀಸರು ಮಾಡಿದ್ದರಿಂದ ಗರ್ಭಿಣಿ ಮಹಿಳೆ ಸಿಲುಕಿ ನರಳಾಡುವಂತಾಗಿತ್ತು.

ರಸ್ತೆ ಬಂದ್ ವಿರುದ್ಧ ಸ್ಥಳೀಯ ವಾಹನ ಸವಾರರು ಅಕ್ರೋಶ ವ್ಯಕ್ತಗೊಳಿಸಿದ್ರು. ಆಸ್ಪತ್ರೆಯ ಪಕ್ಕದಲ್ಲೇ ಟ್ರಾಫಿಕ್ ಜಾಮ್ ಆಗಿದ್ದರಿಂದ, ಬಿಸಿಲಿನ ಝಳಕ್ಕೆ ಬಸವಳಿದ ಗರ್ಭಿಣಿಯನ್ನು ಗಮನಿಸಿದ ಆಟೋ ಚಾಲಕರು ಪೊಲೀಸರ ವಿರುದ್ಧ ಕೆಂಡಾಮಂಡಲರಾದರು. ಸ್ಥಳೀಯ ಆಟೋ ಚಾಲಕರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೇರೆ ರಿಕ್ಷಾದಲ್ಲಿ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋದರು.

ಪಾದಯಾತ್ರೆ ಬರುವ ಒಂದು ಗಂಟೆ ಮುಂಚೆ ರಸ್ತೆ ತಡೆ ಮಾಡಿದ್ದಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *