ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು, ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು: ಪ್ರೀತಂಗೌಡ

ಹಾಸನ: ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಪರೋಕ್ಷವಾಗಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.

ಇಂದು ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಸಲು ಹಾಸನ ಡಿಸಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಪ್ರೀತಂಗೌಡ ತಮ್ಮ ಪಕ್ಷದವರ ಜೊತೆ ಪರೋಕ್ಷವಾಗಿ ಹೆಚ್‍ಡಿ.ರೇವಣ್ಣ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ್ದು, ಅವರು ಮಾತನಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕುಟುಂಬದಿಂದ ಒಬ್ಬರೇ ಚುನಾವಣೆಗೆ ನಿಲ್ಲಲಿ ಎಂದು ಕಾನೂನು ತರಲಿ: ಹೆಚ್.ಡಿ ರೇವಣ್ಣ

Revanna

ನಮ್ಮದು 12:05 ಕ್ಕೆ ನಾಮಪತ್ರ ಸಲ್ಲಿಸಲು ಸಮಯ ಕೇಳಿದ್ದೇವೆ. ನಮ್ಮದೂ ನಿಂಬೆಹಣ್ಣಿನ ಶಾಸ್ತ್ರವೇ. ವಿರೋಧಿಗಳು ಏನು ಮಾಡ್ತಾರೋ ನಾವು ಅದನ್ನೆ ಮಾಡುತ್ತೇವೆ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಅದೇ ರೀತಿ ನಿಂಬೆಹಣ್ಣನ್ನು ನಿಂಬೆಹಣ್ಣಿಂದ ತೆಗೆಯಬೇಕು ಎಂದು ರೇವಣ್ಣಗೆ ಪರೋಕ್ಷವಾಗಿ ಪ್ರೀತಂಗೌಡ ಟಾಂಗ್ ಕೊಟ್ಟರು.  ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ: ಹವಾಮಾನ ಇಲಾಖೆ

Comments

Leave a Reply

Your email address will not be published. Required fields are marked *