ಗಲಾಟೆಗೆ ಪ್ರಚೋದನೆ ಮಾಡೋದಷ್ಟೇ ಪ್ರತಾಪ್ ಸಿಂಹ ಕೆಲ್ಸ- ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

ಕೊಪ್ಪಳ: ಪ್ರತಾಪ್ ಸಿಂಹ ಬರೀ ಪೇಪರ್ ಸಿಂಹ. ಗಲಾಟೆಗೆ ಪ್ರಚೋದನೆ ಮಾಡೋದಷ್ಟೇ ಅವನ ಕೆಲಸ ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಕಿಡಿ ಕಾರಿದ್ದಾರೆ.

ಜಿಲ್ಲೆಯ ಗಂಗಾವತಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪೇಪರ್ ಸಿಂಹ ಬರೀ ಕೀ ಕೊಟ್ಟು ಪ್ರಚೋದನೆ ಕೊಡೋದು ಅವನ ಕೆಲಸ. ಗಂಗಾವತಿ ಗಲಾಟೆ ಆದಾಗ ಅಲ್ಲಿಂದ ಮಂದಿ ಕಳಿಸುತ್ತಿದ್ದ. ಆಗ ನಮಗೆ ಯೋಚನೆ ಆಗಿಬಿಡುತ್ತಿತ್ತು. ಆತ ಸುಮ್ಮನೆ ಪೇಪರ್ ನಲ್ಲಿ ಬರೆಯೋದು ಕೆಲಸಕ್ಕೆ ಬರುವಂಗಿಲ್ಲ. ಆತ ನನ್ನ ಬಗ್ಗೆ ಪೇಪರನಲ್ಲಿ ಹೇಳಿಕೆ ಕೊಟ್ಟಿದ್ದ. ಅದೆಲ್ಲ ಲೆಕ್ಕಕ್ಕೆ ಬರೋಲ್ಲ. ಆತ ಪ್ರತಾಪ್ ಸಿಂಹ ಅಲ್ಲ ಪೇಪರ್ ಸಿಂಹ ಅಂತಾ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ವ್ಯಂಗ್ಯವಾಡಿದರು.

ಗೂಂಡಾಗಳಿಂದ ಗಂಗಾವತಿ ಬಚಾವೋ ಆಂದೋಲನ ಸಮಿತಿಯಿಂದ ನವೆಂಬರ್ 16 ರಂದು ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಮತ್ತೆ ಆರ್‍ಎಸ್‍ಎಸ್, ಬಿಜೆಪಿ ದೋಸ್ತಿ ಬಿಟ್ಟು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟಿಸಿ ನಿನ್ನ ಸಾಮಥ್ರ್ಯವನ್ನು ತೋರಿಸು ಅಂತಾ ಸವಾಲು ಹಾಕಿ ಮಾಜಿ ಎಂಎಲ್‍ಸಿ ಎಚ್.ಆರ್ ಶ್ರೀನಾಥಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನು ಓದಿ:  4 ಮದುವೆಯಾಗಿ ಮತ್ತೊಂದು ಮದುವೆಗೆ ಸಿದ್ಧವಾಗಿರೋ ಶಾಸಕರ ಬಂಟ

Comments

Leave a Reply

Your email address will not be published. Required fields are marked *