ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ

ಮಡಿಕೇರಿ: ಹಿಜಬ್-ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, 1947 ರಲ್ಲೇ ಭಾರತವನ್ನು ವಿಭಾಗ ಮಾಡಲಾಗಿದೆ. ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಮಾಡಿರುವುದು ಏಕೆ? ಧರ್ಮ ಜಾತಿಗಳ ಭೇದವಿಲ್ಲದೇ, ಭ್ರಾತೃತ್ವದಿಂದ ಕಲಿಯಲು ಸಮವಸ್ತ್ರ ಮಾಡಲಾಗಿದೆ. ಶಿಕ್ಷಣ ನೀತಿ ನಿಯಮಗಳ ಆಧಾರದಲ್ಲಿ ಸಮವಸ್ತ್ರ ಮಾಡಲಾಗಿದೆ. ಆದರೆ ನೀವು ಹಿಜಬ್ ಆದರೂ ಹಾಕಿ, ಪೈಜಾಮ ಆದರೂ ಹಾಕಿ ಟೋಪಿಯನ್ನಾದರೂ ಹಾಕಿ ಅವುಗಳನ್ನು ಹಾಕಿಕೊಂಡು ಮದರಸಾಗಳಿಗೆ ಹೋಗಿ ಕಲಿಯಿರಿ ಎಂದಿದ್ದಾರೆ.

ಎಲ್ಲರೂ ಕಾಲೇಜಿಗೆ ಹೋಗಿ ಕಲಿಯುವುದು ಉದ್ಯೋಗಕ್ಕಾಗಿ ಆದರೆ, ನೀವು ಹಿಜಬ್‍ಗಾಗಿ ಕಾಲೇಜಿಗೆ ಹೋಗಿ ಕಲಿಯುತ್ತೀರಾ. ಅಲ್ಲದೇ ನಮ್ಮ ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣೇಶ ಪೂಜೆ ಮಾಡುವುದನ್ನು ಪ್ರಶ್ನಿಸಲು ಇವರು ಯಾರು? ಎಂದು ಕಿಡಿಕಾಡಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

ಭಾರತದ ಬುನಾದಿಯೇ ಹಿಂದೂ ಧರ್ಮ. ಇದು ಒಂದು ಜೀವನ ಪದ್ಧತಿ ಎಂದು ಸಂವಿಧಾನವೇ ಹೇಳಿದೆ. ಹೀಗಾಗಿ ಗಣೇಶ, ಸರಸ್ವತಿ ಪೂಜೆ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ಪಾಲಿಸುತ್ತೇವೆ. ಅದನ್ನು ಯಾರು ಕೇಳಬೇಕಾಗಿಲ್ಲ. ನಾವು ಮೆಕ್ಕಾ, ಮದೀನಾ ಅಥವಾ ಜೆರಸಲೇಮ್‍ಗೆ ಹೋಗಿ ಗಣೇಶ ಸರಸ್ವತಿ ಪೂಜಿಸುತ್ತಿಲ್ಲ ಎಂದು ಆಕ್ರೋಶ ವ್ಯಕಪಡಿಸಿದ್ದಾರೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

Comments

Leave a Reply

Your email address will not be published. Required fields are marked *