ಯಾರಾದ್ರೂ ಹುಚ್ಚ ವೆಂಕಟ್‍ಗೆ ಸಹಾಯ ಮಾಡ್ಬೇಕಂದ್ರೆ ಇಷ್ಟು ಮಾಡಿ ಸಾಕು: ಪ್ರಥಮ್ ಮನವಿ

ಬೆಂಗಳೂರು: ಒಂದು ಕಡೆ ಹುಚ್ಚವೆಂಕಟ್ ಅವರಿಗೆ ಚಿಕಿತ್ಸೆಯ ಸಹಾಯವಿದೆ ಎಂದು ನಟ ಭುವನ್ ಮನವಿ ಮಾಡಿಕೊಂಡಿದ್ರೆ, ಇತ್ತ ಬಿಗ್‍ಬಾಸ್ ವಿನ್ನರ್ ಪ್ರಥಮ್, ನಾವು ಹುಚ್ಚವೆಂಕಟ್ ಎಂದು ಹೇಳುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

ನಟ ಪ್ರಥಮ್ ಹುಚ್ಚವೆಂಕಟ್ ಸ್ಥಿತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪತ್ರವನ್ನು ಬರೆದು ಅದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ “ಯಾರಾದರೂ ಹುಚ್ಚವೆಂಕಟ್ ಅವರಿಗೆ ಸಹಾಯ ಮಾಡಬೇಕು ಅಂತ ಇದ್ದರೆ ಇಷ್ಟು ಮಾಡಿ ಸಾಕು. ಅದೇ ದೊಡ್ಡ ಉಪಕಾರ. ಇದನ್ನೂ ಎಲ್ಲರೂ ಶೇರ್ ಮಾಡಿ. ಒಂದು ಒಳ್ಳೆಯ ವಿಚಾರ ನಾಲ್ಕು ಜನಕ್ಕೆ ತಲುಪಿಸಿದರೆ ಅದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದು ಬರೆದುಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?
ನೆನ್ನೆ ರಾತ್ರಿ ನನ್ನ ಗೆಳತಿಯೊಬ್ಬರು ಮೆಸೇಜ್ ಮಾಡಿ, “ಏನ್ರೀ ಪ್ರಥಮ್, ಹುಚ್ಚವೆಂಕಟ್‍ಗೆ ಸಹಾಯ ಮಾಡ್ರಿ ಪಾಪ” ಎಂದರು. ತಕ್ಷಣ ನಾನು ಹೌದು ವೆಂಕಟ್ ಅವರಿಗೆ ಸಹಾಯ ಮಾಡುತ್ತೀನಿ. ಈಗಾಗಲೇ ನಾನು ಸಹಾಯ ಮಾಡಿದ್ದೀನಿ ಎಂದೆ. ಅದಕ್ಕೆ ಅವರು ಯಾವಾಗ ಸಹಾಯ ಮಾಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು “ನಾನು ಅವರನ್ನು ವೆಂಕಟ್ ಅಂತ ಕರೆಯುವುದೇ ನಾನು ಅವರಿಗೆ ಮಾಡುವ ಸಹಾಯ ಎಂದೆ. ಅವರನ್ನು ಹುಚ್ಚವೆಂಕಟ್ ಅಂತ ಪ್ರಚೋದಿಸುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಎಂದರು.

ನಾವೆಲ್ಲರೂ ಅವರನ್ನು ವೆಂಕಟ್ ಆಗೇ ನೋಡೋಣ, ಅವರಿಗೆ ಅನುಕಂಪ ತೋರಿಸುವ ಬದಲು ಅವಮಾನ ಮಾಡದೇ ಅವರನ್ನು ಅವರಷ್ಟಕ್ಕೆ ಬಿಡೋಣ. ಇದೇ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *