ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದದ್ದು: ಮುತಾಲಿಕ್

ಧಾರವಾಡ: ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದ ನೀಚ, ರಾಕ್ಷಸ ಕೃತ್ಯವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಕಿಡಿಗೇಡಿ ಮುಸ್ಲಿಮರ ಅತಿಯಾದ ಪ್ರವೃತ್ತಿ ನಿರ್ಮಾಣ ಆಗುತ್ತಿದೆ. ಐಸಿಸಿಯಲ್ಲಿ ತಾಲಿಬಾನಿ ಈ ರೀತಿ ಗುಂಡು ಹೊಡೆಯುವುದು ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲಿ ಪ್ರಾರಂಭವಾಗಿದ್ದು, ಈ ಘಟನೆ ಅತ್ಯಂತ ಗಂಭೀರ ವಿಚಾರವಾಗಿದೆ ಎಂದರು.

ಇದನ್ನು ಹಿಂದೂ ಸಮಾಜ, ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲದೇ ಇದನ್ನು ಹದ್ದುಬಸ್ತಿನಲ್ಲಿ ಇಟ್ಟು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ, ಇದೇ ಮಾನಸಿಕತೆ ಮುಂದುವರೆಯಲಿದೆ ಎಂದ ಅವರು, ಮೋದಿ ಅವರ ಮೇಲೂ ಇದೇ ಮಾದರಿಯಲ್ಲಿ ಕೊಲೆ ಮಾಡ್ತೆವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಟೈಲರ್ ಕೊಲೆಗಡುಕರನ್ನು ಗುಂಡಿಟ್ಟು ಹತ್ಯೆ ಮಾಡ್ಬೇಕು: ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

ಕೊಲೆ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ ಹಾಕದೇ ಭಯೋತ್ಪಾದಕ ಸೆಕ್ಷನ್ ಹಾಕಬೇಕು. ಕೊಲೆಗಡುಕರು ಹೊರಗೆ ಬರಬಾರದು, ಅಷ್ಟೇ ಅಲ್ಲ, ಒಂದೇ ತಿಂಗಳಲ್ಲಿ ವಾದ ವಿವಾದ ಮಾಡಿ ಗಲ್ಲು ಶಿಕ್ಷೆ ಕೊಡಬೇಕು ಎಂದರು. ಇದನ್ನೂ ಓದಿ: ಉದಯಪುರ ಹತ್ಯೆ: ಆರೋಪಿಗಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಜೊತೆ ನಂಟು

ನಾವೇ ಕೊಂದಿದ್ದೆವೆ, ಇನ್ನು ಕೊಲ್ತೆವೆ ಎಂದು ಕೊಲೆ ಮಾಡಿದವರು ಹೇಳಿದ್ದಾರೆ. ಈ ಹೇಳಿಕೆಯೊಂದೇ ಘಟನೆಗೆ ಮುಖ್ಯ ಸಾಕ್ಷಿಯಾಗಿದ್ದು, ಇನ್ನೂ ತನಿಖೆಯ ಅವಶ್ಯಕತೆಯಿಲ್ಲ. ಇದರ ಒಂದು ಆಧಾರ ಮೇಲೆ ಕೊಲೆಗಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲವೇ ಬೀದಿ ಬೀದಿಯಲ್ಲಿ ಹುಚ್ಚು ನಾಯಿಗೆ ಹೊಡೆದಂತೆ ಎನ್‍ಕೌಂಟರ್ ಮಾಡಿ, ಅದಾಗಲೇ ಈ ರೀತಿ ಮಾನಸಿಕತೆ ಹೋಗಲಿದೆ ಎಂದು ಕಿಡಿಕಾರಿದರು.

ಇವರಿಗೆ ಕಾನೂನು, ಸರ್ಕಾರ, ಹಿಂದೂ ಸಮಾಜದ ಭಯವಿಲ್ಲ. ಹೀಗಾಗಿ ಈ ರೀತಿ ರಾಕ್ಷಸ ಮಾನಸಿಕತೆ ಪ್ರವೃತ್ತಿ ನಡೆಯುತ್ತಿದೆ. ಆ ಟೇಲರ್‍ನನ್ನು ಮೋಸದಿಂದ ಕೊಲೆ ಮಾಡಿದ್ದಾರೆ ಎಂದು ವಿರೋಧಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಬಾಯಿ ಬಿಡಬೇಕು. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕಲ್ಲಂಗಡಿ ಒಡೆದಂತ ಸಂದರ್ಭದಲ್ಲಿ ಮುಸ್ಲಿಂ ಪರವಾಗಿ ನಿಂತಿದ್ದರು. ಆದರೆ ಇವತ್ತು ರುಂಡ ಕತ್ತಿರಿಸಿದವರ ಬಗ್ಗೆ ಏನ್ ಹೇಳ್ತಿರಿ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್, ಜೆಡಿಎಸ್‍ನವರ ಜೊತೆಗೆ ಬುದ್ಧಿ ಈ ಘಟನೆಗೆ ಸಂಬಂಧಿಸಿ ಮಾತನಾಡಬೇಕು. ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಬೇಕು ಎಂದರು.

Live Tv

Comments

Leave a Reply

Your email address will not be published. Required fields are marked *