ಬಿಜೆಪಿ ನಾಯಕರ ಮೇಲೆ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಗರಂ

ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಕೆ ಮಾಡಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಜ್ವಲ್ ಅಭಿಮಾನಿಗಳು ಗರಂ ಆಗಿದ್ದಾರೆ.

ಸರ್ಕಾರಿ ಕಾರನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ಟೀಕಿಸಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಬಿಜೆಪಿ ಶಾಸಕ ಪ್ರೀತಂ ಗೌಡಗೆ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರೀತಂ ಗೌಡ ಅವರ ವಿರುದ್ಧ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಯೂತ್ ಐಕಾನ್ ಎಂಬ ಫೇಸ್‍ಬುಕ್ ಖಾತೆ ಮೂಲಕ ಬಿಜೆಪಿ ನಾಯಕರನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಯಾವ ಕಾರನ್ನ ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ಕನಿಷ್ಟ ಜ್ಞಾನ ನಮಗಿದೆ. ಅದನ್ನ ಮಹಾ ಮೇದಾವಿ(ಮೂದೇವಿ)ಯಿಂದ ಕಲಿಯಬೇಕಿಲ್ಲ. ಕಾರ್ಯಕರ್ತರನ್ನು ಭೇಟಿ ಮಾಡಲು ಬರುವಾಗ ಪ್ರಜ್ವಲ್ ಅವರ ಕಾರು ಕೆಟ್ಟು ಹೋಗಿತ್ತು. ಹಾಗಾಗಿ ಅವರು ಸರ್ಕಾರಿ ಕಾರಲ್ಲಿ ಡ್ರಾಪ್ ಪಡೆದಿದ್ದಾರೆ ಅಷ್ಟೇ. ಅದನ್ನೇ ಬಿಜೆಪಿ ಅವರು ದೊಡ್ಡ ಸುದ್ದಿ ಮಾಡಿದ್ದಾರೆ. ಹಾಸನದ ಶಾಸಕ ಪ್ರೀತಂ ಗೌಡ ಚೀಪ್ ಪಾಲಿಟಿಕ್ಸ್ ಗಿಮಿಕ್ ಮಾಡಿದ್ದಾರೆ ಎಂದು ಪ್ರಜ್ವಲ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

ಹಾಸನ ಕ್ಷೇತ್ರದ ಅಭಿವೃದ್ಧಿ ಮಾಡುವ ಕಿಂಚಿತ್ತು ನೈತಿಕತೆ ಇಲ್ಲದವರು ಈ ರೀತಿ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ. ಜನರು ನಿಮ್ಮ ಸುಳ್ಳು ಸುದ್ದಿಗಳನ್ನು ನಂಬುವುದಿಲ್ಲ, ನಿಮ್ಮ ಮಾತು ನಿಮಗೆ ತಿರುಗುಬಾಣ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಜ್ವಲ್ ರೇವಣ್ಣ ಅವರ ಕಾರು ರಿಪೇರಿಗೆ ಬಿಟ್ಟಿರುವ ಫೋಟೋ ಹಾಗು ಜಾಬ್ ಶೀಟ್ ಫೋಟೋ ಹಾಕಿ ಪ್ರೀತಂ ಚೀಪ್ ಪಾಲಿಟಿಕ್ಸ್ ಗಿಮಿಕ್ಸ್ ನಡೆಯಲ್ಲ ಎಂದು ಟೀಕಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನಾಯಕ ಕಾರು ದುರ್ಬಳಕೆ ಮಾಡಿಲ್ಲ, ಡ್ರಾಪ್ ಪಡೆದಿದ್ದಾರೆ ಎಂದು ಅಭಿಮಾನಿಗಳು ಪ್ರಜ್ವಲ್ ರೇವಣ್ಣ ಅವರ ಪರವಹಿಸಿದ್ದಾರೆ.

https://www.facebook.com/permalink.php?story_fbid=1479224588874678&id=696208787176266

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *