ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

ಬೀದರ್: ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಎರಡು ಬಾರಿ ಕರೆಂಟ್ ಕಟ್ಟಾಗಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಗರಂ ಆಗಿದ್ದ ಘಟನೆ ಬೀದರ್‍ ರಂಗಮಂದಿರದಲ್ಲಿ ನಡೆದಿದೆ.

ಇಂದು ಸಚಿವರಿಗೆ ದಲಿತ ಪರ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಗರಂ ಆದ ಸಚಿವರು ರೈತರಿಗಾಗಿ ನಿರಂತರ ಜ್ಯೋತಿ ನೀಡಬೇಕು ಹಾಗೂ ಸಮಸ್ಯೆ ಇರುವ ಕಡೆ ದುರಸ್ಥಿ ಕಾರ್ಯ ನಡೆಸ ಬೇಕು ಎಂದು ಜೆಎಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ ಅದರು ಸಮಸ್ಯೆ ಬಗೆಹರಿದಿಲ್ಲ ಎಂದು ಗರಂ ಆದರು.

ರೈತರು ನಿರಂತವಾಗಿ ಈ ಕುರಿತು ತಮಗೇ ದೂರು ನೀಡುತ್ತಾರೆ. ವಿದ್ಯುತ್ ಸರಿಯಾಗಿ ನೀಡದ ಹಿನ್ನೆಲೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದೆ. ರೈತರು ಅಧಿಕಾರಿಗಳಿಗೆ ಫೋನ್ ಮಾಡಿ ಸುಸ್ತಾಗಿ ಕೊನೆಗೆ ನಮಗೆ ಫೋನ್  ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *