ಕಡು ಬಡತನದಲ್ಲೂ ಛಲ ಬಿಡದೇ ಶಿಕ್ಷಣದಲ್ಲಿ ಸಾಧನೆಗೈದ ವಿದ್ಯಾರ್ಥಿ

ಬಳ್ಳಾರಿ: ಕಡು ಬಡತನ, ಕಷ್ಟಗಳ ನಡುವೆಯೂ ವಿದ್ಯಾರ್ಥಿಯೊರ್ವ ಛಲ ಬಿಡದೇ ಓದಿ ದ್ವಿತೀಯ ಪಿಯುಸಿ ಶಿಕ್ಷಣ ವಿಭಾಗದಲ್ಲಿ 571 ಅಂಕಗಳನ್ನು ಪಡೆದು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಹೌದು. ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ದಾದು ಖಲಂದರ್ ದ್ವಿತೀಯ ಪಿಯುಸಿಯಲ್ಲಿ 571 ಅಂಕಗಳಿಸಿ ಉತ್ತೀರ್ಣನಾಗುವ ಮೂಲಕ ಬಡ ವಿಧ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಬಡತನ ಶಾಪವಲ್ಲ. ಬಡತನವನ್ನು ಮೆಟ್ಟಿ ನಿಂತರೆ ಸಾಧನೆಯ ಹಾದಿ ದೂರವಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ನನ್ನ ತಂದೆಯ ಅಕಾಲಿಕ ಮರಣದಿಂದ ತಾಯಿಗೆ ಎದುರಾದ ಸಂಕಷ್ಠ ನನ್ನ ಇಂದಿನ ಸಾಧನೆಗೆ ಕಾರಣ. ಇಂದು ತುಂಬಾ ಖುಷಿಯಾಗುತ್ತಿದೆ ಎಂದು ವಿದ್ಯಾರ್ಥಿ ಸಂತೋಷವನ್ನು ಹಂಚಿಕೊಂಡಿದ್ದಾನೆ. ಇದನ್ನೂ ಓದಿ:ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಾದು ತನ್ನ ತಾಯಿ ಕಷ್ಟವನ್ನ ಕಣ್ಣಾರೆ ಕಂಡು ನೊಂದುಕೊಳ್ಳದ ದಿನವೇ ಇಲ್ಲ, ತಾಯಿ ಪಟ್ಟ ಕಷ್ಟಕ್ಕೆ ಪ್ರತಿಫಲವಾಗಿ ದಾದು ದ್ವಿತೀಯ ಪಿಯು ಶಿಕ್ಷಣ ವಿಭಾಗದಲ್ಲಿ 571 ಅಂಕಗಳಿಸುವ ಮೂಲಕ ಉತ್ತಮ ಸಾಧನೆಗೈದಿದ್ದಾನೆ. ಇದನ್ನೂ ಓದಿ:ಬಳ್ಳಾರಿಯ ಇಂದು ಕಾಲೇಜಿನ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಕಟ್ಟಿಟ್ಟ ಬುತ್ತಿ – ಈ ಕಾಲೇಜಿನ ವಿಶೇಷತೆ ಏನು?

ಕಳೆದ ಹತ್ತು ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡ ದಾದು ತಾಯಿ ಆಶ್ರಯದಲ್ಲಿ ಬೆಳೆದನು. ಹೂವಿನಹಡಗಲಿ ಪುರಸಭೆಯಲ್ಲಿ ತಂದೆ ಮಾಬುಸಾಬು ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದರು. ಆದ್ರೆ ಮಾಬುಸಾಬ್ ಅಕಾಲಿಕ ಮರಣ ಹೊಂದಿದ ನಂತರ ತಾಯಿ ಮಾಬುನ್ನಿ ಕೂಡ ಅದೇ ಪುರಸಭೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮುಂದುವರೆಸಿದರು. ಕಷ್ಟ ಪಟ್ಟು ತನ್ನ ಮಗನಿಗೆ ಶಿಕ್ಷಣ ಕೊಡಿಸಿ, ಆತನ ಸಾಧನೆಗೆ ಬೆನ್ನೆಲುಬಾಗಿ ಜೊತೆಗೆ ನಿಂತರು. ಇದೀಗ ಬಡ ತಾಯಿ ಮತ್ತು ಮಗ ದಾದು ಖಲಂದರ್ ಸಾಧನೆಗೆ ಹೂವಿನಹಡಗಲಿಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *