ಆರ್ಡರ್ ಮಾಡಿದ ಮೂರೇ ಗಂಟೆಯಲ್ಲಿ 21 ಡಿವೈಎಸ್‌ಪಿ, 110 ಮಂದಿ ಇನ್‌ಸ್ಪೆಕ್ಟರ್‌ ವರ್ಗಕ್ಕೆ ತಡೆ

– ಡಿಜಿಪಿ ನೀಲಮಣಿ ರಾಜು ಆದೇಶ

ಬೆಂಗಳೂರು: ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆದಿದ್ದು, ಸಂಕಷ್ಟದಲ್ಲೂ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ವರ್ಗಾವಣೆ ಆದೇಶಕ್ಕೆ ಡಿಜಿಪಿ ನೀಲಮಣಿ ರಾಜು ತಡೆ ನೀಡಿದ್ದಾರೆ.

110 ಮಂದಿ ಇನ್‌ಸ್ಪೆಕ್ಟರ್‌ ಮತ್ತು 21 ಜನ ಡಿವೈಎಸ್‍ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಅವರು ವರ್ಗಾವಣೆ ಆದೇಶಕ್ಕೆ ತಡೆ ಹಿಡಿದಿದ್ದಾರೆ.

ಸಂಜೆ ಸುಮಾರು 7 ಗಂಟೆಗೆ ಡಿವೈಎಸ್‍ಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ರಾತ್ರಿ 10 ಗಂಟೆಗೆ ಸರ್ಕಾರದ ವರ್ಗಾವಣೆ ಆದೇಶವನ್ನು ನೀಲಮಣಿ ಅವರು ಕ್ಯಾನ್ಸಲ್ ಮಾಡಿದ್ದಾರೆ.

ಉಲ್ಲೇಖಿತ ಈ ಕಚೇರಿಯ ಆದೇಶಗಳಲ್ಲಿ ವರ್ಗಾಯಿಸಿರುವ ಡಿವೈಎಸ್‍ಪಿ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ ಅವರುಗಳ ವರ್ಗಾವಣೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ. ಸಂಬಂಧಪಟ್ಟ ಘಟಕಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ಎಂದು ನೀಲಮಣಿಯವರು ಪತ್ರ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *