ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯ ಕರ್ಮಕಾಂಡ – 7 ವೈದ್ಯರ ವಿರುದ್ಧ ಚಾರ್ಜ್‍ಶೀಟ್

ಬೆಂಗಳೂರು: ನಗರದ ನಂದಿನಿ ಬಡಾವಣೆಯಲ್ಲಿ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯ ಕರ್ಮಕಾಂಡ ನಿಮಗೆ ನೆನಪಿರಬಹುದು. ದುಡ್ಡಿಗಾಗಿ ಇಲ್ಲಿನ ವೈದ್ಯರು ರೋಗಿಗಳಿಗೆ ಇಲ್ಲದ ಕಾಯಿಲೆ ಬರಿಸಿ ದುಡ್ಡು ಹೊಡೀತಿದ್ರು. ಇದರ ಬಗ್ಗೆ ಪಬ್ಲಿಕ್ ಟಿವಿಯೇ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈಗ ಪೊಲೀಸ್ರು ಇದಕ್ಕೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಡಾ. ಎಚ್.ಎಂ.ಯತೀಶ್ ಕುಮಾರ್, ಡಾ. ಜ್ಯೋತಿ, ಡಾ.ಎಸ್.ಶ್ರೀನಿವಾಸ್, ಡಾ.ಬಿ.ಜೆ.ಶ್ರೀನಿವಾಸ್, ಡಾ. ಎಲ್.ಕೆ. ರಾಜೀವ್, ಡಾ.ರಾಮಚಂದ್ರ ಅವರು ಉದ್ದೇಶ ಪೂರ್ವವಾಗಿಯೇ ಸರ್ಕಾರದ ವಿಮಾ ಯೋಜನೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರೋಗಿಗಳಿಗೆ ಇಲ್ಲದ ರೋಗ ಬಂದಿದೆ ಅಂತಾ ಹೇಳಿ ದುಡ್ಡು ದೋಚಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಆರೋಪಿಸಲಾಗಿದೆ.

ಇಷ್ಟರ ನಡುವೆ ನಿಮ್ಮ ಆಸ್ಪತ್ರೆ ಮುಚ್ಚಿ ಅಂತ ಆರೋಗ್ಯ ಇಲಾಖೆ ನೋಟೀಸ್ ಕೊಟ್ಟಿದ್ರೂ ಕೂಡ ಆಸ್ಪತ್ರೆ ಆಡಳಿತ ಮಂಡಳಿ ಕ್ಯಾರೆ ಅಂತಿಲ್ಲ.

Comments

Leave a Reply

Your email address will not be published. Required fields are marked *