ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

ಶಿವಮೊಗ್ಗ: ನಾಲ್ಕೂವರೆ ಅಡಿಯ ಉದ್ದದ ಹಾವು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿತ್ತು. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದ ವಿಶೇಷ ಅತಿಥಿಯನ್ನು ಕಂಡು ಒಂದು ಕ್ಷಣ ಪೊಲೀಸರೇ ಭಯಭೀತರಾಗಿದ್ದರು.

ಜಯನಗರ ಠಾಣೆಯಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿತ್ತು. ಠಾಣೆಯೊಳಗೆ ಪ್ರವೇಶಿಸಿದ್ದ ಹಾವು ಠಾಣೆಯ ಟೇಬಲ್ ಕೆಳಗೆ ಅವಿತು ಕುಳಿತಿತ್ತು. ಹಾವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಭಯಭೀತರಾಗಿ ಠಾಣೆಯಿಂದ ಹೊರ ಬಂದಿದ್ದಾರೆ. ಕೂಡಲೇ ಸ್ನೇಕ್ ಕಿರಣ್ ಗೆ ದೂರವಾಣಿ ಕರೆ ಮಾಡಿ ಠಾಣೆಗೆ ಹಾವು ಬಂದಿರುವ ವಿಷಯ ತಿಳಿಸಿದ್ದು, ಹಾವು ಹಿಡಿದುಕೊಂಡು ಹೋಗುವಂತೆ ತಿಳಿಸಿದ್ದಾರೆ.

ಠಾಣೆಗೆ ಆಗಮಿಸಿದ ಸ್ನೇಕ್ ಕಿರಣ್ ಟೇಬಲ್ ಕೆಳಗೆ ಅವಿತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿ ಅರಣ್ಯ ಸಿಬ್ಬಂದಿಯ ಸಹಾಯದೊಂದಿಗೆ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಮಾತನಾಡಿದ ಸ್ನೇಕ್ ಕಿರಣ್, ಇದೊಂದು ವಿಷ ರಹಿತ ಹಾವು, ಆಹಾರ ಅರಸಿ ಠಾಣೆಯತ್ತ ಬಂದಿದೆ. ಠಾಣೆಯಲ್ಲಿ ಇಲಿಗಳು ಇದಿದ್ದರಿಂದ ಬಂದು ಟೇಬಲ್ ಅಡಿಯಲ್ಲಿ ಕುಳಿತಿತ್ತು. ಶಿವಮೊಗ್ಗ ನಗರದಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೇ ನನಗೆ ಮಾಹಿತಿ ನೀಡಿ. ಭಯದಲ್ಲಿ ಅವುಗಳ ಪ್ರಾಣಕ್ಕೆ ಅಪಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *