ನಾವು ನೀವೆಲ್ಲಾ ಮನೆ ಕಟ್ತಿರೋದು ಫಿಲ್ಟರ್ ಮರಳಲ್ಲೇ – ಖಾಕಿ ಲಂಚಬಾಕತನಕ್ಕೆ ಸಿಕ್ತು ಸಾಕ್ಷಿ

ಕೋಲಾರ: ಖಡಕ್ ರಾಜಕಾರಣಿ ಆರೋಗ್ಯ ಸಚಿವ ರಮೇಶ್ ಕುಮಾರ್ ತವರಲ್ಲೇ ಕೆರೆಗಳ ಕಗ್ಗೊಲೆ ನಡೆಯುತ್ತಿದೆ. ಕೋಲಾರದ ಮಾಲೂರಿನಲ್ಲಿರುವ ಬಹುತೇಕ ಕೆರೆಗಳಲ್ಲಿ ಫಿಲ್ಟರ್ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಮುಂಗಾರು ಕೊರತೆಯ ನಡುವೆಯೂ ಕೆರೆಗಳಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ನೀರನ್ನು ಫಿಲ್ಟರ್ ದಂಧೆಗೆ ಬಳಸಲಾಗುತ್ತಿದೆ. ಇದೇ ಮರಳನ್ನು ರಾತ್ರೋರಾತ್ರಿ ಮಹಾನಗರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸರಬರಾಜು ಮಾಡಲಾಗ್ತಿದೆ. ಮರಳು ದಂಧೆಕೋರ ಪ್ರಭಾಕರ್‍ನಿಂದ ಮಾಲೂರು ಠಾಣೆಗೆ ತಿಂಗಳಿಗೆ 50 ಸಾವಿರ ರೂಪಾಯಿ ಸಂದಾಯವಾಗಿದೆ ಎಂದು ತಿಳಿದುಬಂದಿದೆ.

ದಂಧೆ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಪೊಲೀಸರು ಬೆದರಿಸ್ತಿದ್ದಾರಂತೆ. ಯಾವುದಾದರೊಂದು ಕೇಸ್ ಹಾಕಿ ಸಿಲುಕಿಸೋ ಧಮ್ಕಿ ಹಾಕ್ತಿದ್ದಾರೆ ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯ ಮುಖ್ಯಪೇದೆ ವೆಂಕಟರಾಮೇಗೌಡ ಮರಳು ದಂಧೆಯಲ್ಲಿ ಭಾಗಿಯಾಗಿರುವ ಸೋಮಶೇಖರ್ ನಡೆಸಿರುವ ಆಡಿಯೋ ತುಣುಕು ಕೂಡ ಲಭ್ಯವಾಗಿದೆ. ಆದ್ರೆ ಡಿಸಿ ಮಾತ್ರ ಫಿಲ್ಟರ್ ಮರಳು ದಂಧೆಯನ್ನು ಸುತಾರಂ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ.

https://www.youtube.com/watch?v=yWyalvTLt-E

Comments

Leave a Reply

Your email address will not be published. Required fields are marked *