ರೈಲು ಬರುವಾಗ ಹಳಿಯಲ್ಲಿದ್ದ ಯುವಕನನ್ನು ಜಿಗಿದು ರಕ್ಷಿಸಿದ ಪೊಲೀಸ್ ಪೇದೆ

ಮುಂಬೈ: ಪ್ಲಾಟ್‍ಫಾರ್ಮ್‍ನಿಂದ ರೈಲ್ವೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 18 ವರ್ಷದ ಯುವಕನನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಸಿಬ್ಬಂದಿ ಹೃಷಿಕ್ಷ್ ಮಾನೆ ರಕ್ಷಿಸಿದ್ದಾರೆ. ಪೊಲೀಸ್ ಪೇದೆಯ ಈ ಧೈರ್ಯವನ್ನು ಕಂಡ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಮುನುಸ್ವಾಮಿ ಬಲಿ ಪಡೆದ ಕಾಲಿವುಡ್ ಖ್ಯಾತ ನಟ ಸಿಂಬು ಕಾರು

ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಧುರೈ ಎಕ್ಸ್‌ಪ್ರೇಸ್ ರೈಲು ಬರುತ್ತಿರುವ ವೇಳೆ ಪ್ಲಾಟ್‍ಫಾರ್ಮ್‍ನಿಂದ ಯುವಕನು ರೈಲ್ವೇ ಹಳಿಗಳ ಮೇಲೆ ಹಾರಿದ್ದಾನೆ. ಆದರೆ ರೈಲ್ವೇ ಪ್ಲಾಟ್‍ಫಾರ್ಮ್‍ನಲ್ಲಿ ಯುವಕ ಅಡ್ಡಾಡುತ್ತಿರುವುದನ್ನು ಕಂಡು ಕಾನ್‍ಸ್ಟೇಬಲ್ ಹೃಷಿಕ್ಷ್ ಅವರು ರಕ್ಷಣೆಗೆ ಧಾವಿಸಿದ್ದಾರೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪಶ್ಚಿಮ ರೈಲ್ವೇ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಘಟನೆಯ ನಂತರ ಅಧಿಕಾರಿಗಳು ಯುವಕನನ್ನು ಕಲ್ಯಾಣ್ ರೈಲ್ವೇ ಪೊಲೀಸ್ ಠಾಣೆಗೆ ಕರೆದೊಯ್ದು ಪೋಷಕರಿಗೆ ಕರೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *