ರೈಲ್ವೆ ಇಲಾಖೆಯ ಹಳೇ ವಸ್ತುಗಳನ್ನ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

ಯಾದಗಿರಿ: ಕಳ್ಳನೊಬ್ಬ ರೈಲ್ವೆ ಇಲಾಖೆಯ ಹಳೇ ವಸ್ತುಗಳನ್ನು ಕಳ್ಳತನ ಮಾಡಲು ಹೋಗಿ ಪೊಲೀಸರ ಅಥಿತಿಯಾಗಿರುವ ಘಟನೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೇಬಲ ವಯರ್ ಸೇರಿದಂತೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ವಸ್ತುಗಳನ್ನ ಬೀದರ ಮೂಲದ ಶಿವಪ್ಪ ಎಂಬವನು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.

ಕಳ್ಳತನ ಮಾಡಿ ವಸ್ತುಗಳನ್ನ ಸಾಗಣೆ ಮಾಡುವಾಗ ಆರ್‍ಪಿಎಫ್ ಎಎಸ್‍ಐ ಎಮ್‍ಜಿ ಅಲಿಬೇಗ್ ಹಾಗೂ ಸಿಬ್ಬಂದಿ ರಾಚಣ್ಣಗೌಡ ಪಾಟೀಲ್ ಕಳ್ಳನನ್ನು ಬಂಧಿಸಿದ್ದಾರೆ. ಸುಮಾರು 5 ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಕಳ್ಳನಿಂದ ಆರ್‍ಪಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಯಾದಗಿರಿ ರೈಲ್ವೆ ಭದ್ರತಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಶಿವಪ್ಪನನ್ನು ನ್ಯಾಯಾಲಯಕ್ಕೆ ಹಾಜರಪಡಿಸಿಲಾಗಿತ್ತು. ಸದ್ಯ ಅರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ.

Comments

Leave a Reply

Your email address will not be published. Required fields are marked *