ಸಾಕ್ಷಿ ಸಮೇತ ಪೊಲೀಸರ ಬಲೆಗೆ ಬಿದ್ದ ಬೇಟೆಗಾರರು..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗೋಬ್ರಾಲ್ ಎಂಬ ಗ್ರಾಮದದಲ್ಲಿ ಕಾಡುಪ್ರಾಣಿಗಳಿಗೆ ಬಲೆಗಳನ್ನು ಹಾಕಿ ಬೇಟೆಯಾಡುತ್ತಿದ್ದ ಹೋಮ್ ಸ್ಟೇ ಮಾಲೀಕ ಸೇರಿದಂತೆ ಮೂವರನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ.

ಬಂಧಿತನನ್ನು ಹಳಿಯಾಳ ತಾಲೂಕಿನ ಗೋಬ್ರಾಲ್ ಗ್ರಾಮದ ಸ್ಟ್ಯಾನಲಿ ಫ್ಯಾಡ್ರಿಕ್ಸ್ (57), ಸುಭಾಷ್ ಧರ್ಮ ಪೂಜಾರಿ (35) ಮತ್ತು ಬಾಬುಬಾಲು ಗುರಕೆ (40) ಎಂದು ಗುರುತಿಸಲಾಗಿದೆ. ಹಳಿಯಾಳ, ದಾಂಡೇಲಿ ಕಾಡಿನ ಭಾಗದಲ್ಲಿ ಪ್ರಾಣಿಗಳ ಬೇಟೆಗಾಗಿ ಬಲೆಗಳನ್ನು ಹಾಕಿದ್ದು, ಈ ಬಲೆಗೆ ಗುರುವಾರದಂದು ಚಿರುತೆ ಸಿಲುಕಿ ಪ್ರಾಣಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಳಿಯಾಳ ತಾಲೂಕಿನ ಗೋಬ್ರಾಲ್ ವಲಯ ಅರಣ್ಯಾಧಿಕಾರಿಗಳು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿ ಚಿರತೆ ಮೃತದೇಹವನ್ನು ವಶಕ್ಕೆ ಪಡೆದಿದ್ದರು.

ಬಳಿಕ ತನಿಖೆ ನಡೆಸಿದಾಗ ಹಳಿಯಾಳ ತಾಲೂಕಿನ ಗೋಬ್ರಾಲ್ ಎಂಬ ಗ್ರಾಮದ ಹೋಮ್ ಸ್ಟೇ ಮಾಲೀಕ ಪ್ರಾಣಿಗಳನ್ನು ಮಾಂಸ ಹಾಗೂ ಚರ್ಮಕ್ಕಾಗಿ ಬೇಟೆಯಾಡುತ್ತಿರುವುದು ಪತ್ತೆಯಾಗಿತ್ತು. ದಾಳಿ ನಡೆಸಿದ ವೇಳೆ 2 ಕೆ.ಜಿ ಕಾಡು ಹಂದಿ ಮಾಂಸ ಫ್ರಿಜ್ ನಲ್ಲಿ ಸಿಕ್ಕಿದೆ. ನಂತರ ಮನೆಯನ್ನು ಶೋಧ ನಡೆಸಿದಾಗ ಒಂದು ಪ್ಯಾಕ್ ಗನ್ ಪೌಡರ್, 1-ಬಟನ್ ನೈಫ್, ಎರಡು ಗನ್ ಗಳು, ನಾಲ್ಕು ಮೊಬೈಲ್, ಕತ್ತಿ, ಬೇಟೆಗೆ ಬಳಸುತ್ತಿದ್ದ ನೈಲನ್ ದಾರ ಹಾಗೂ ಬುಲೆಟ್‍ಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಳಿಯಾಳ ವಲಯ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *