ನಾನು ಮನೆಯಲ್ಲಿ ಇಲ್ಲ, ದೇಶ ಕಾಯೋ ನಮಗೆ ನ್ಯಾಯ ಕೊಡಿಸಿ – ಸಾಮಾಜಿಕ ಜಾಲತಾಣದಲ್ಲಿ ಯೋಧನ ಮನವಿ

ಮೈಸೂರು: ದೇಶ ಕಾಯಲು ಹೋಗಿದ್ದೇನೆ, ಆದರೆ ನನ್ನ ಕುಟುಂಬಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಈಗಾಲಾದರು ನಮಗೇ ನ್ಯಾಯ ಕೊಡಿಸಿ ಎಂದು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ನಿವಾಸಿಯಾಗಿದ್ದ ಯೋಧರೊಬ್ಬರು ಮನವಿ ಮಾಡಿದ್ದಾರೆ.

ಯೋಧ ಮಂಜುನಾಥ್ ಈ ಕುರಿತು ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೇಳೆ ತಾನು ದೇಶ ಕಾಯುವ ಕರ್ತವ್ಯದ ಮೇರೆಗೆ ಸೇನೆಗೆ ಹೋಗಿದ್ದು ನನ್ನ ಕುಟುಂಬಕ್ಕೆ ಈಗಲಾದರು ಪೊಲೀಸರು ನ್ಯಾಯ ನೀಡಿ ಎಂದು ಹೇಳಿದ್ದಾರೆ.

ಏನಿದು ಘಟನೆ: ಮಂಜುನಾಥ್ ಸೈನ್ಯದಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ ರಾಜೀವ್ ಗ್ರಾಮದ ವಾಸಿಸುವ ಮಂಜುನಾಥ್ ಅವರು ತನ್ನ ತಂದೆ ಮೇಲೆ ಕೆಲವರು ಜನರು ವಿನಾಃಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಸೇನಾ ಸಮವಸ್ತ್ರದಲ್ಲೇ ಬೇಸರ ವ್ಯಕ್ತಪಡಿಸಿರುವ ಮಂಜುನಾಥ್, ಅಪಘಾತದ ಪ್ರಕರಣದಲ್ಲಿ ತಂದೆ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಆದರೆ ತನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಅಪಘಾತ ಮಾಡಿದವರ ಕಡೆಯವರೆ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದಾರೆ. ಆದರೂ ಪೊಲೀಸರು ಈವರೆಗೂ ತಪ್ಪು ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ನಾನು ಕರ್ತವ್ಯದಲ್ಲಿದ್ದು, ನಾನು ಮನೆಯಲ್ಲಿ ಇರುವುದಿಲ್ಲ. ದೇಶ ಕಾಯೋ ನಮಗೆ ನಮ್ಮ ತಂದೆಗೆ ಆದ ಅನ್ಯಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

https://www.youtube.com/watch?v=2aXwzCRZCbM

Comments

Leave a Reply

Your email address will not be published. Required fields are marked *