ವೈರಲ್ ಆಯ್ತು ಮಂಡ್ಯ ಯುವಕರ ಸಸಿ ನೆಡುವ ಚಾಲೆಂಜ್

ಮಂಡ್ಯ: ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ನೀವು ಬಾಟಲ್ ಓಪನ್ ಚಾಲೆಂಜ್, ಕಿಕಿ ಚಾಲೆಂಜ್ ರೀತಿಯ ಹಲವು ಚಾಲೆಂಜ್‍ಗಳನ್ನು ನೋಡಿದ್ದೀರಾ, ಆದರೆ ಇದೀಗ ಮಂಡ್ಯದಲ್ಲಿ ಹೊಸ ಚಾಲೆಂಜ್‍ವೊಂದು ಸದ್ದು ಮಾಡುತ್ತಿದೆ.

ಪರಿಸರವನ್ನು ರಕ್ಷಣೆ ಮಾಡುವ ಸಲುವಾಗಿ ಮಂಡ್ಯ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳ ಕನಸು ಎಂಬ ಶೀರ್ಷಿಕೆಯಲ್ಲಿ ಗಿಡ ನೆಡುವ ಚಾಲೆಂಜ್ ಶುರು ಮಾಡಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲದೇ ಇತರೆ ಭಾಗದಲ್ಲೂ ಯುವಕರು ಹಾಗೂ ಪೊಲೀಸರು ಈ ಚಾಲೆಂಜ್‍ನ್ನು ಸ್ವೀಕರಿಸಿ, ನಾವು ನಿಮ್ಮ ಚಾಲೆಂಜ್‍ನ್ನು ಸ್ವೀಕರಿಸಿದ್ದೇವೆ ಎಂದು ಗಿಡ ನೆಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಖುಷಿ ಪಟ್ಟಿದ್ದಾರೆ.

ಈ ಹಿಂದೆ ವೈರಲ್ ಆಗಿದ್ದ ಹಲವು ಹುಚ್ಚು ಚಾಲೆಂಜ್‍ಗಳಿಗಿಂತ ಮಂಡ್ಯ ಯುವಕರು ಆರಂಭಿಸಿರುವ ಗಿಡ ನೆಡುವ ಚಾಲೆಂಜ್ ವಿಭಿನ್ನವಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿದು, ಇಲ್ಲಸಲ್ಲದ ಕಲುಷಿತ ವಸ್ತುಗಳನ್ನು ಭೂಮಿ ಮೇಲೆ ಹಾಕಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಾನೆ. ಈ ನಡುವೆ ಪ್ರಕೃತಿಯನ್ನು ರಕ್ಷಣೆ ಮಾಡುವ ಗಿಡ ನೆಡುವ ಚಾಲೆಂಜ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.

Comments

Leave a Reply

Your email address will not be published. Required fields are marked *