ಡೀಸೆಲ್ ಆಧಾರಿತ ಜೆನ್‍ಸೆಟ್ಸ್ ಗಳನ್ನು ಕರ್ನಾಟಕ ಬ್ಯಾನ್ ಮಾಡಬೇಕು: ಧರ್ಮೇಂದ್ರ ಪ್ರಧಾನ್

ಬೆಂಗಳೂರು: ಡೀಸೆಲ್ ಆಧಾರಿತ ಜೆನ್‍ಸೆಟ್ಸ್ ಗಳನ್ನು ಕರ್ನಾಟಕ ಬ್ಯಾನ್ ಮಾಡಬೇಕು. ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಿ ಅಂತ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಬೆಂಗಳೂರು ನಗರ ಅನಿಲ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನ್, ದಾಬೋಲ್- ಬೆಂಗಳೂರು ಅನಿಲ ಸಾಗಾಟ ಮಾರ್ಗ ಯೋಜನೆ ಪೂರ್ಣಗೊಂಡು ಬೆಂಗಳೂರಿಗೆ ಅನಿಲ ಪೂರೈಕೆಯಾಗುತ್ತಿದೆ. ಕೊಚ್ಚಿ-ಮಂಗಳೂರು ಅನಿಲ ಮಾರ್ಗ ಮುಂದಿನ ವರ್ಷದ ಅಂತ್ಯಕ್ಕೆ ಮುಗಿಯಲಿದೆ. ಚೆನ್ನೈ-ಬೆಂಗಳೂರು ಯೋಜನೆಯ ಪ್ರಸ್ತಾವನೆ ನಮ್ಮ ಮುಂದೆ ಇದೆ ಎಂದರು.

ಮುಂದಿನ 5 ವರ್ಷಗಳಲ್ಲಿ 60 ಸಿಎನ್‍ಜಿ ಸ್ಟೇಷನ್‍ಗಳ ಸ್ಥಾಪಿಸಿ 1ಕೋಟಿ 32 ಲಕ್ಷ ಮನೆಗಳಿಗೆ ನಿರಂತರ ಅನಿಲ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪೆಟ್ರೋಲ್ ದರ ನಿತ್ಯ ನಿಗದಿ ವಿಚಾರದಲ್ಲಿ ಪೆಟ್ರೋಲಿಯಂ ಪಂಪ್‍ಗಳ ಮಾಲೀಕರು ಕೆಲವು ಸಮಸ್ಯೆಗಳು ಇರುವುದು ನಿಜ. ಪೆಟ್ರೋಲ್ ದರ ನಿತ್ಯ ನಿಗದಿ ವಿಚಾರದಲ್ಲಿ ಗ್ರಾಹಕನೇ ರಾಜ.ಇದರ ಬಗ್ಗೆ ಯಾರು ಕೂಡ ಆತಂಕ ಪಡಬೇಕಿಲ್ಲ ಎಂದರು.

ಇದೇ ವೇಳೆ ಬೆಂಗಳೂರು ಹೊಗೆ ಮುಕ್ತ ನಗರವಾಗಿಸಲು ಸಿಎನ್‍ಜಿ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸಚಿವ ಅನಂತಕುಮಾರ್ ಒತ್ತಾಯ ಮಾಡಿದ್ರು.

 

Comments

Leave a Reply

Your email address will not be published. Required fields are marked *