ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಕಾಲು ಜಾರಿ ಜಲಪಾತದೊಳಗೆ ಬಿದ್ದ ವ್ಯಕ್ತಿಯೊಬ್ಬರು ಎರಡು ದಿನ ಬಂಡೆಯ ಮೇಲೆ ಕಾಲಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

 

ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 37 ವರ್ಷದ ಖಾದರ್ ಕಳೆದ ಶನಿವಾರ ಗಗನಚುಕ್ಕಿಗೆ ಬಂದಿದ್ರು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.

ಮೇಲಿಂದ ಬಿದ್ದ ರಭಸಕ್ಕೆ ಇವರ ಎಡಗೈ, ಕಾಲು ಮುರಿದು ಮೂರ್ಛೆ ತಪ್ಪಿದ್ದಾರೆ. ನಂತರ ಕಣ್ಣು ಬಿಟ್ಟು ನೋಡಿದಾಗ ಕತ್ತಲಾಗಿತ್ತು. ಎರಡು ದಿನ ಕೂಗಿಕೊಂಡರೂ, ಯಾರೊಬ್ಬರಿಗೂ ಇವರ ಚೀರಾಟ ಕೇಳಿಸಿಲ್ಲ.

ಖಾದರ್ ನೀರನ್ನೇ ಕುಡಿದು ಎರಡು ದಿನ ಕಾಲ ಕಳೆದಿದ್ದಾರೆ. ಇಂದು ಪ್ರವಾಸಿಗರು ಬಂದಿರೋದನ್ನ ಗಮನಿಸಿದ ಖಾದರ್, ತಾನು ಹಾಕಿಕೊಂಡಿದ್ದ ಕೆಂಪು ಬಟ್ಟೆಯನ್ನ ತೋರಿಸಿ ಕೂಗಿಕೊಂಡಿದ್ದಾರೆ.

ಇದನ್ನ ಗಮನಿಸಿದ ಸಾರ್ವಜನಿಕರು ಈ ಮಾಹಿತಿಯನ್ನ ಬೆಳಕವಾಡಿ ಪೊಲೀಸರಿಗೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ನುರಿತರನ್ನು ಜಲಪಾತದ ಕೆಳಕ್ಕೆ ಇಳಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಖಾದರ್ ಅವರನ್ನ ರಕ್ಷಣೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *