ರವಿ ಪೂಜಾರಿ ಹೆಸರಲ್ಲಿ ಡಿಕೆ ಸುರೇಶ್‍ಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾ ಇದ್ರೆ ಇತ್ತ ಹಣಕ್ಕಾಗಿ ಭೂಗತ ಪಾತಕಿ ರವಿ ಪೂಜಾರಿ ಫೋನ್ ಮಾಡಿ ಡಿಕೆ ಸುರೇಶ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಸುರೇಶ್ ಅವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದು ಮಂಗಳೂರು ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ. ರವಿ ಪೂಜಾರಿಯ 50ಕ್ಕೂ ಹೆಚ್ಚು ಬಂಟರಲ್ಲಿ ಮಂಗಳೂರಿನ ಒಬ್ಬ ಸುರೇಶ್‍ಗೆ ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ಡಿ.ಕೆ.ಸುರೇಶ್ ಅವರ ಚಾಲಕನಿಗೆ ರವಿ ಪೂಜಾರಿ ಬೆದರಿಕೆ ಹಾಕಿಲ್ಲವೆಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಫೋನ್ ಮಾಡಿದ ವ್ಯಕ್ತಿಯೂ ಸಹ ಸದ್ಯ ಭೂಗತವಾಗಿದ್ದಾನೆ. ಆತ ರವಿ ಪೂಜಾರಿಯ ಜೊತೆ ಇನ್ನೂ ಸಂಪರ್ಕ ಹೊಂದಿದ್ದಾನಾ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *