ಆಸ್ತಿ ವಿಚಾರಕ್ಕೆ ಯೋಧನ ಕುಟುಂಬಕ್ಕೆ ಧಮ್ಕಿ – ಮನೆಯಲ್ಲಿದ್ದ ಸ್ಕೂಟಿಗೆ ಬೆಂಕಿ

ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಭಾರತೀಯ ಸೇನೆಯಲ್ಲಿರುವ ಯೋಧನ ಕುಟುಂಬಕ್ಕೆ ಧಮ್ಕಿ ಹಾಕಿ ಅವರ ಮನೆಯಲ್ಲಿಯ ಸ್ಕೂಟಿ ಸುಟ್ಟ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ವಿನಾಯಕ ಪೇಟೆಯಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಯೋಧ ಶರಣಬಸನಗೌಡ ಹಲೊಳ್ಳಿ ಅವರ ಕುಟುಂಬಕ್ಕೆ ಕಿಶೋರ್ ಆನೆಗುಂದಿ ಎಂಬಾತ ಧಮ್ಕಿ ಹಾಕಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ಮನೆ ಕಟ್ಟುವ ಜಾಗದ ವಿಷಯವಾಗಿ ಎರಡು ಕುಟುಂಬದ ಮಧ್ಯೆ ಕಳೆದ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದೆ. ಅಂತಿಮವಾಗಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಯೋಧನ ಕುಟುಂಬದ ಪರವಾಗಿ ತೀರ್ಪು ಬಂದಿದೆ. ಇದರಿಂದ ಹತಾಶೆಗೊಂಡು ಮನೆ ಮುಂದಿನ ಸ್ಕೂಟಿಗೆ ಬೆಂಕಿ ಹಾಕಿ ಕೃತ್ಯ ಮೆರೆದಿದ್ದಾರೆ ಎಂದು ಯೋಧನ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಸ್ಕೂಟಿಗೆ ಬೆಂಕಿ ಹಚ್ಚಿದ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿದ ನವಲಗುಂದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *