ಮೈಸೂರು: ನಡುರಸ್ತೆಯಲ್ಲೇ ವ್ಯಕ್ತಿಯ ಅಪಹರಣ

ಮೈಸೂರು: ವ್ಯಕ್ತಿಯೊಬ್ಬರನ್ನು ನಡುರಸ್ತೆಯಲ್ಲೇ ಅಪಹರಣ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ಬಜಾರ್ ರಸ್ತೆಯಲ್ಲಿ ನಡೆದಿದೆ.

ನಗರದ ಆಯುರ್ವೇದ ಔಷಧಿ ವೈದ್ಯ ಅಪ್ಸರ್ ಪಾಷ (28) ಅಪಹರಣಕ್ಕೆ ಒಳಗಾದ ವ್ಯಕ್ತಿ. ಬೆಂಗಳೂರು ಮೂಲದ 5 ಮಂದಿ ತಂಡದಿಂದ ಅಪಹರಣ ಶಂಕೆ ವ್ಯಕ್ತವಾಗಿದೆ.

ಅಪ್ಸರ್ ಪಾಷ ತಮ್ಮ ಅಕ್ಕನ ಮಗನ ಜೊತೆ ಬಟ್ಟೆ ತರಲು ಹೋದ ವೇಳೆ ಈ ಘಟನೆ ನಡೆದಿದೆ. ಈ ವೇಳೆ ಸ್ಥಳಕ್ಕೆ ಬಂದ ಐವರ ತಂಡ ಬೆಂಗಳೂರು ನೋಂದಣಿ ಇರುವ ಕಾರಿನಲ್ಲಿ ಇಬ್ಬರನ್ನೂ ಅಪಹರಿಸಲು ಯತ್ನಿಸಿದ್ದಾರೆ. ಈ ವೇಳೆ ಅಪ್ಸರ್ ಪಾಷ ಅವರ ಜೊತೆಗಿದ್ದ ನದೀಂ ಖಾನ್ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾರೆ. ಅಪಹರಣ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿಗಳೂ ಅಪ್ಸರ್ ಪಾಷ ರನ್ನು ಏಕೆ? ಅಪಹರಣ ಮಾಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

https://www.youtube.com/watch?v=6azj64IYa0Q

Comments

Leave a Reply

Your email address will not be published. Required fields are marked *