ಸರ್ಕಾರಿ ಜಮೀನನ್ನು ಸೇಲ್ ಮಾಡಿದ ಉಡುಪಿಯ ಭೂಪ!

ಉಡುಪಿ: ಮೋಸ ಮಾಡೋಕೆ ಖದೀಮರು ಸಾವಿರ ದಾರಿಗಳನ್ನು ಹುಡುಕಿಕೊಳ್ತಾರೆ. ಒಂದೇ ದಾರಿಯಲ್ಲಿ ಹೋದ್ರೆ ಜನ ಎಚ್ಚೆತ್ತುಕೊಳ್ತಾರೆ ಅಂತ ಗೋಲ್ ಮಾಲ್ ಗಿರಾಕಿಗಳಿಗೆ ಗೊತ್ತಾಗಿದೆ.

ಹೌದು. ಉಡುಪಿಯ ಹಿರಿಯಡ್ಕದ ಪುತ್ತಿಗೆ ನಿವಾಸಿ ಸುಧಾಕರ ಶೆಟ್ಟಿ ಕಾಸು ಮಾಡುವ ಗೋಜಿನಲ್ಲಿ ಸರ್ಕಾರಿ ಜಮೀನನ್ನು ಮಾರಾಟ ಮಾಡಿದ್ದಾರೆ. ತನ್ನ ಮನೆ ಪಕ್ಕದಲ್ಲಿದ್ದ ಸರ್ಕಾರಿ ಜಮೀನನ್ನು ಸೈಟ್ ಮಾಡಿ ಸೇಲ್ ಮಾಡಿದ್ದಾರೆ. 8 ಮಂದಿ ಸುಮಾರು ಒಂದು ಎಕ್ರೆಯಷ್ಟು ಜಮೀನನ್ನು ಖರೀದಿ ಮಾಡಿದ್ದಾರೆ. ಒಂದೊಂದು ಸೆಂಟ್ಸ್ ಜಮೀನಿಗೆ 10 ರಿಂದ 15 ಸಾವಿರ ರೂಪಾಯಿ ಕೊಟ್ಟು 8 ಜನ ಖರೀದಿ ಮಾಡಿದ್ದಾರೆ.

ಎರಡು ಕುಟುಂಬ ಮನೆಕಟ್ಟಿ ಕುಳಿತಿದೆ. ಆದ್ರೆ ಸ್ಥಳೀಯ ಹಿರಿಯಡ್ಕ ಪಂಚಾಯತ್ ಅಧಿಕಾರಿಗಳು ಬಂದು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದು ಯಾಕೆ ಎಂದು ಪ್ರಶ್ನಿಸಿ ಮನೆಗಳನ್ನು ಭಾಗಶಃ ಕೆಡವಿದ್ದಾರೆ. ಸರ್ಕಾರಿ ಜಮೀನು ಸೇಲ್ ಮಾಡಿದ ಭೂಪ ಸುಧಾಕರ ಶೆಟ್ಟಿ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. ಜಾಗ ಖಾಲಿ ಮಾಡಿ ಅಂತ ಸುಧಾಕರ ಶಟ್ಟಿ ಕಿರುಕುಳ ನೀಡುತ್ತಿದ್ದಾನೆ. ಎರಡು ಕುಟುಂಬಗಳು ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದು, ನಾಲ್ಕು ಮಕ್ಕಳನ್ನು ಕಂಡರೆ ಕರುಳು ಚುರ್ ಅನ್ನುತ್ತಿದೆ. ನಾವು ಕೊಟ್ಟ ಹಣ ವಾಪಾಸ್ ಕೊಡಲಿ, ಜಮೀನಿಲ್ಲದ ನಮಗೆ ಸರ್ಕಾರ ಜಮೀನು ಮಂಜೂರು ಮಾಡಲಿ ಅಂತ ಒತ್ತಾಯಿಸುತ್ತಿದ್ದಾರೆ.

ಎರಡು ಮಕ್ಕಳು ಶಾಲೆಗೆ ಹೋಗ್ತಾರೆ. ನಾಲ್ಕು ವರ್ಷ ಕರೆಂಟ್ ಇಲ್ಲದೆ ನಾವು ಜೀವನ ಮಾಡಿದೆವು. ಈಗ ಜಾಗ ಖಾಲಿ ಮಾಡಬೇಕು ಎಂದು ಒತ್ತಾಯ ಮಾಡುತಿದ್ದಾರೆ. ಗಂಡ ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ ಮಾಡಿ ಜಾಗಕ್ಕೆ ಹಣ ಕೊಟ್ಟಿದ್ದೇವೆ. ನಮಗೆ ರಕ್ಷಣೆ ಬೇಕು ಎಂದು ಸಮಸ್ಯೆಗೊಳಗಾದ ಗೃಹಿಣಿ ವಿಜಯ ಪಬ್ಲಿಕ್ ಟಿವಿ ಮುಂದೆ ಕಣ್ಣೀರಿಟ್ಟಿದ್ದಾರೆ.

ಸುಧಾಕರ ಶೆಟ್ಟಿ ಊರಿನವರಿಗೆ ಮಾತ್ರ ಸಮಸ್ಯೆ ಕೊಟ್ಟಿದ್ದಲ್ಲ. ತನ್ನ ಒಡಹುಟ್ಟಿದ ಅಕ್ಕ ಸರೋಜಿನಿಗೂ ಮೋಸ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಚಿಕ್ಕ ಮನೆಕಟ್ಟುತ್ತಿದ್ದಾಗಿನಿಂದ ಈ ಕ್ಷಣದವರೆಗೆ ಕಿರುಕುಳ ಕೊಡುತ್ತಿದ್ದಾರೆ. ನನಗೆ ಹೀಗಾದ್ರೆ ಮುಂದೆ ಬೇದರೆಯವರಿಗೆ ಎಷ್ಟು ಸಮಸ್ಯೆಯಾಗಲಿಕ್ಕಿಲ್ಲ ಅಂತ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *