ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲಿಯೇ ಪಾದಚಾರಿ ಸಾವು

ಧಾರವಾಡ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಮಡಕಿಹೊನ್ನಿಹಳ್ಳಿ ರಸ್ತೆಯ ವಿಶ್ವಚೇತನ ಶಾಲೆಯ ಎದುರು ನಡೆದಿದೆ.

ಮಡಕಿಹೊನ್ನಿಹಳ್ಳಿ ಗ್ರಾಮದ ಯಲ್ಲಪ್ಪ ಪುಟ್ಟಪ್ಪ ತಳವಾರ (55) ಮೃತ ವ್ಯಕ್ತಿ. ಮನೆಯಿಂದ ಕಲಘಟಗಿ ಪಟ್ಟಣಕ್ಕೆ ನಡೆದಕೊಂಡು ಹೋಗುವಾಗ ತಲೆಯ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ವೃತಪಟ್ಟಿದ್ದಾರೆ.

ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *