ದೀಪಾವಳಿಗೆ ತಂದಿದ್ದ ಸೀರೆ ಸರಿಯಿಲ್ಲ ಎಂದ ಪತ್ನಿ-ಮನನೊಂದ ಪತಿ ಆತ್ಮಹತ್ಯೆ

ಹಾವೇರಿ: ದೀಪಾವಳಿ ಹಬ್ಬದ ಪ್ರಯುಕ್ತ ತಂದಿದ್ದ ಬಟ್ಟೆ ಸರಿಯಿಲ್ಲ ಎಂಬ ಪತ್ನಿಯ ಮಾತಿನಿಂದ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಅರಿಶಿಣಗುಪ್ಪಿ ಗ್ರಾಮದಲ್ಲಿ ನಡೆದಿದೆ.

50 ವರ್ಷದ ಚಂದ್ರಪ್ಪ ಮಲ್ಲಾಪುರ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಹಬ್ಬದ ಪ್ರಯುಕ್ತ ಚಂದ್ರಪ್ಪ ಪತ್ನಿಗಾಗಿ ಹೊಸ ಸೀರೆಯನ್ನು ಖರೀದಿಸಿದ್ದರು. ಪತಿ ತಂದಿದ್ದ ಸೀರೆ ಚೆನ್ನಾಗಿಲ್ಲ ಎಂಬ ವಿಚಾರಕ್ಕೆ ದಂಪತಿಯ ನಡುವೆ ಕಳೆದ ರಾತ್ರಿ ಜಗಳ ನಡೆದಿತ್ತು.

ಪತ್ನಿಯ ಮಾತಿನಿಂದ ಬೇಸರಗೊಂಡ ಪತಿ ಮನೆಯ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *