ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

ಳ್ಳಿಗಳಲ್ಲಿ ತಂಟೆ ತಕರಾರು, ವ್ಯಾಜ್ಯಗಳು ಏನೇ ಇದ್ರೂ ಸಿದ್ದಗಂಗಾ ಮಠದಲ್ಲಿ ಬಗೆಹರಿಯುತಿತ್ತು. ಇದ್ರಿಂದ ಕೋರ್ಟ್ ಕಚೇರಿಗಳಿಗೆ ಹೋಗಿ ಅಪಾರ ಹಣ ವೆಚ್ಚ ಮಾಡೋದು ತಪ್ಪುತಿತ್ತು. ಕೆಲವೊಮ್ಮೆ ಜಟಿಲವಾದ ಸಮಸ್ಯೆಯನ್ನು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ಬಗೆಹರಿಸುತ್ತಿದ್ರು.

ಸಿದ್ದಗಂಗಾ ಶ್ರೀಗಳು ವಾದಿ, ಪ್ರತಿವಾದಿಗಳನ್ನು ಕರೆದರೆ ಯಾರೂ ಹಿಂದೇಟು ಹೊಡೆದು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹತ್ತು ಹನ್ನೆರಡು ವರ್ಷ ನ್ಯಾಯಾಲಯದಲ್ಲಿ ಬಗೆಹರಿಯದ ಸಾಕಷ್ಟು ಸಮಸ್ಯೆಗಳನ್ನು ಶ್ರೀಗಳು ಒಂದೇ ದಿನದಲ್ಲಿ ಬಗೆಹರಿಸುತ್ತಿದ್ದರು. ಸಾಮಾಜಿಕ ನ್ಯಾಯಮೂರ್ತಿಗಳಾಗಿದ್ದ ಶ್ರೀಗಳ ಹಿತನುಡಿ ಉಭಯ ಪಕ್ಷಗಳಿಗೂ ಅಭಯ ರಕ್ಷೆ. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

ಪ್ರಕರಣದಲ್ಲಿ ಸೋಲು, ಗೆಲುವುಗಳ ಪ್ರಶ್ನೆಯಿಲ್ಲ, ಲಾಭ ನಷ್ಟಗಳ ದೃಷ್ಟಿಯಿಲ್ಲ, ಗುರುಗಳ ಆಶೀರ್ವಾದವೊಂದೇ ಇಲ್ಲಿ ಮುಖ್ಯ. ಗುಲಗಂಜಿಯಷ್ಟು ಶ್ರೀಗಳ ತೀರ್ಪಿನಲ್ಲಿ ಅನ್ಯಾಯಕ್ಕೆ ಅವಕಾಶವಿರಲ್ಲ ಅನ್ನೋದು ಜನಮನದ ಅಚಲ ನಂಬಿಕೆ. ಅವರ ಲೋಕಪ್ರಜ್ಞೆಯಿಂದಲೇ, ಆಗಾಧ ವಿದ್ವತ್ತಿನಿಂದಲೇ ಪೂಜ್ಯರು ನಮ್ಮನ್ನು ಕೈಹಿಡಿದು ನಡೆಸುತ್ತಾರೆ ಅನ್ನವ ನಂಬಿಕೆ ಎಲ್ಲರಲ್ಲಿತ್ತು. ಇದನ್ನೂ ಓದಿ:  ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

ಜಾತ್ರಿಯ ಸಮಯದಲ್ಲಿ ಸೌದೆಗಾಗಿ ಕೊಡಲಿ ಹಿಡಿದ್ರು!
ಶಿವರಾತ್ರಿ ಸಮಯದಲ್ಲಿ ಮಠದ ಜಾತ್ರೆ ವೀಕ್ಷಿಸಲು ಲಕ್ಷಾಂತರ ಮಂದಿ ಬರ್ತಾರೆ. ಮೂರು ಹೊತ್ತು ದಾಸೋಹ ನಿರಂತರವಾಗುತ್ತೆ. ಭೀಮ ಕಾಯದ ಕೊಳಗದಲ್ಲಿ ಪಾಯಸ, ಕೊಪ್ಪರಿಗೆಯಲ್ಲಿ ಮುದ್ದೆ, ಅನ್ನ ಬಸಿಯಲು ನಾಲ್ಕು ತಪ್ಪಲೆ ಹೀಗೆ ಅಡುಗೆ ಪಾಡಲು ಎಷ್ಟು ಗಾಡಿ ಸೌದೆಯೂ ಸಾಲುತ್ತಿರಲಿಲ್ಲವಂತೆ.

ಸೌದೆಯ ಅಭಾವದಿಂದ ಸಿದ್ದಗಂಗಾ ಶ್ರೀಗಳೇ 200- 300 ವಿದ್ಯಾರ್ಥಿಗಳ ಜೊತೆ ದೇವರಾಯ ದುರ್ಗದ ಕಾಡಲ್ಲಿ ಅಲೆದು, ಖುದ್ದು ಕೊಡಲಿ ಹಿಡಿದು ಸೌದೆ ಹೊಂದಿಸುತ್ತಿದ್ದರು. ಒಲೆಯ ಅಡುಗೆಯನ್ನಷ್ಟೇ ಇಲ್ಲಿ ಮಾಡಲಾಗುತ್ತೆ. ಉರಿದ ಒಲೆ ಇಂದಿಗೂ ಮಠದಲ್ಲಿ ಆರಿಲ್ಲ ಅನ್ನೋದು ಪ್ರಚಲಿತ ಮಾತು.  ಇದನ್ನೂ ಓದಿ:ಸಿದ್ದಗಂಗಾ ಮಠದ ದಾಸೋಹ ಒಂದು ಪವಾಡ – ಒಲೆಯ ಬೆಂಕಿ ಒಂದು ದಿನವೂ ಆರಿಲ್ಲ

ಜೋಳಿಗೆಯಲ್ಲಿ ಬಿಕ್ಷೆ ಬೇಡಿದ್ರು:
ಆರಂಭದಲ್ಲಿ ಮಠದ ಏಳಿಗೆಗಾಗಿ ಮಠವನ್ನು ನಂಬಿ ಬರುವ ಜನರಿಗಾಗಿ ದಾಸೋಹಕ್ಕಾಗಿ ಶ್ರೀಗಳು ಪ್ರಾರಂಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಬಿಕ್ಷಾಟನೆ ಮಾಡಿ ಖರ್ಚುವೆಚ್ಚಗಳಿಗೆ ದುಡ್ಡು ಹೊಂದಿಸುತ್ತಿದ್ದರು.

ಸಿದ್ದಗಂಗಾ ಶ್ರೀಗಳು ಮಠಾಧೀಶರಾದ ಮೇಲೆ ಅನೇಕ ಜನ ಜಾಗವನ್ನು ದಾನವಾಗಿ ನೀಡಿದ್ದಾರೆ. ಶ್ರೀಗಳು ಬಿಕ್ಷಾಟನೆಗೆ ಹೋದರೆ ಒಂದೊಂದು ಊರಲ್ಲಿ ಒಂದು ಅಥವಾ ಎರಡು ದಿನ ತಂಗಿ ಅಲ್ಲಿ ಪೂಜಾದಿಗಳನ್ನು ಮುಗಿಸುತ್ತಿದ್ರು. ಊರಿನವರೆಲ್ಲ ಸ್ವಾಮೀಜಿ ಬಂದ್ರೆ ಸಂಭ್ರಮ. ಸ್ವಾಮೀಜಿಯ ಜೋಳಿಗೆ ತುಂಬಿಸಿ, ಮಠಕ್ಕೂ ಒಂದಿಷ್ಟು ಗಾಡಿಯಲ್ಲಿ ಕಳುಹಿಸುತ್ತಿದ್ದರು. ವಿಶೇಷ ಅಂದ್ರೆ ಮಲೆನಾಡಿನ ಭಾಗವಾದ ಸಕಲೇಶಪುರಕ್ಕೂ ಹೋಗಿಬರುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *