ಉಚಿತ ಕಬ್ಬಿಗಾಗಿ ಕಾದಾಟ – ಮುಗಿಬಿದ್ದು ಕಿತ್ತಾಡಿಕೊಂಡ ಜನ

ತುಮಕೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ತುಮಕೂರಿನಲ್ಲಿ ಉಚಿತವಾಗಿ ಹಂಚುತ್ತಿದ್ದ ಕಬ್ಬಿಗಾಗಿ ಜನರು ಮುಗಿಬಿದ್ದು ಕಿತ್ತಾಡಿಕೊಂಡಿದ್ದಾರೆ.

ತುಮಕೂರು ತಾಲೂಕಿನ ಮಲ್ಲಸಂದ್ರದ ಎಸ್.ಕೆ ಕಲ್ಯಾಣ ಮಂಟಪದಲ್ಲಿ ಕಬ್ಬಿಗಾಗಿ ಕದನವೇ ನಡೆದಿದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ತಮ್ಮ ಆಪ್ತ ಹಾಲನೂರು ಅನಂತ್ ಅವರ ಹುಟ್ಟು ಹಬ್ಬ ಹಾಗೂ ಸಂಕ್ರಾಂತಿ ಪ್ರಯುಕ್ತವಾಗಿ ಸಾರ್ವಜನಿಕರಿಗೆ ಕಬ್ಬು ವಿತರಣೆ ಮಾಡುತ್ತಿದ್ದರು.

ಸುಮಾರು 1.5 ಲಕ್ಷಕ್ಕೂ ಹೆಚ್ಚು ಕಬ್ಬನ್ನು ಲಾರಿಯಲ್ಲಿ ತಂದು ವಿತರಣೆ ಮಾಡುತ್ತಿದ್ದರು. ಕಬ್ಬಿನ ಜೊತೆಗೆ ಸೀರೆ, ಬಾಗಿನವೂ ನೀಡಲಾಗುತಿತ್ತು. ಉಚಿತ ವಿತರಣೆಯ ಸುದ್ದಿ ತಿಳಿದ ಸಾವಿರಾರು ಸಾರ್ವಜನಿಕರು ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಕಬ್ಬು ತೆಗೆದುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದಾರೆ. ಕೆಲವರು ಪರಸ್ಪರ ಕಿತ್ತಾಟ ಕೂಡ ಮಾಡಿಕೊಂಡಿದ್ದಾರೆ. ಜನಸಂದಣಿಯಲ್ಲಿ ಪುಟ್ಟ ಮಕ್ಕಳು, ವೃದ್ಧೆಯರು ಸಿಲುಕಿ ಪ್ರಯಾಸಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *