ಪೂಜೆ ವೇಳೆ ಜಾರಿ ಬಿದ್ದ ಪೇಜಾವರ ಶ್ರೀ – ಗಾಯವಾದ್ರೂ ಲಕ್ಷ ತುಳಸಿ ಅರ್ಚನೆ

ಉಡುಪಿ: ಸದಾ ಚಟುವಟಿಕೆಯಿಂದಿರುವ ಪೇಜಾವರ ಸ್ವಾಮೀಜಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನದ ಪೂಜೆಯ ವೇಳೆಗೆ ಕಾಲುಜಾರಿ ಬಿದ್ದಿದ್ದಾರೆ ಎಂಬ ಮಾಹಿತಿ ಕೃಷ್ಣಮಠದಿಂದ ಸದ್ಯಕ್ಕೆ ಲಭ್ಯವಾಗಿದೆ.

ಶ್ರೀಗಳು ಜಾರಿ ಬಿದ್ದಾಗ ಅವರ ಭುಜಕ್ಕೆ ಸಣ್ಣ ಗಾಯವಾಗಿದೆ. ತಕ್ಷಣ ಸ್ವಾಮೀಜಿಯ ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಗಾಯವಾದ ಪರಿವೆಯೇ ಇಲ್ಲದ ಸ್ವಾಮೀಜಿ ನಿರಂತರ ಚಟುವಟಿಕೆಯಿಂದಿದ್ದಾರೆ.

ದೈನಂದಿನ ಚಟುವಟಿಕೆಗಳಿಗೂ ಹೆಚ್ಚುವರಿಯಾಗಿ ಲಕ್ಷ ತುಳಸಿ ಅರ್ಚನೆಯಲ್ಲಿ ಭಾಗಿಯಾಗಿದ್ದಾರೆ. ಪಾಠ, ಪ್ರವಚನ, ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ವಾಮೀಜಿ ಆರೋಗ್ಯದಿಂದಿದ್ದಾರೆ ಎಂದು ಸ್ವಾಮೀಜಿ ಆಪ್ತರು ಹೇಳಿದ್ದಾರೆ. ಬ್ಯಾಂಡೇಜ್ ಕೂಡಾ ಹಾಕಿಕೊಳ್ಳದೆ ಪೇಜಾವರ ಶ್ರೀಗಳು ಮಠದೊಳಗೆ ಓಡಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *