ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ಚಿಕಿತ್ಸೆ- ಗರ್ಭಿಣಿಯರ ಪಾಲಿಗೆ ನರಕವಾದ ಆಸ್ಪತ್ರೆ

ದಾವಣಗೆರೆ: ಜಿಲ್ಲೆಯ ಇಎಸ್‍ಐ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಅವ್ಯವಸ್ಥೆಗಳ ಆಗರವಾದ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಇಲ್ಲ.

ಮಂಗಳವಾರ ಸಂಜೆಯಿಂದ ಅಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ಅದರಲ್ಲೂ ಹೆರಿಗೆ ಮಾಡಿಸಲು ದಾಖಲಾಗಿದ್ದ ಗರ್ಭಿಣಿಯರು ನಾವು ಆಸ್ಪತ್ರೆಯಲ್ಲಿದ್ದೇವೋ ಇಲ್ಲ ನರಕದಲ್ಲಿ ಇದ್ದೇವೋ ಎನ್ನುವಂತೆ ಭಾಸವಾಗ್ತಿದೆ ಎನ್ನುತ್ತಿದ್ರು.

ಇದ್ರಿಂದ ಬೇಸತ್ತ ಕೆಲವು ಗರ್ಭಿಣಿಯರು ಬೇರೆ ಆಸ್ಪತ್ರೆಗೆ ಹೋದ್ರೆ, ಇನ್ನುಳಿದ ಕೆಲವು ಬಡ ಮಹಿಳೆಯರು ಕತ್ತಲಿನಲ್ಲೇ ಕೂರುವಂತಾಗಿದೆ.

ವಿಚಿತ್ರ ಅಂದ್ರೆ ವೈದ್ಯರು ಹಾಗೂ ಅಸ್ಪತ್ರೆ ಸಿಬ್ಬಂದಿಗಳು ಮೊಬೈಲ್ ಲೈಟ್ ಹಾಗೂ ಟಾರ್ಚ್ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡುಬಂತು. ಅಸ್ಪತ್ರೆಯ ಪಕ್ಕದಲ್ಲಿರುವ ಕ್ವಾಟ್ರಸ್‍ನಲ್ಲಿ ದಿನದ 24 ಗಂಟೆ ಕರೆಂಟ್ ಇರುತ್ತೆ. ಆದ್ರೆ ಅಸ್ಪತ್ರೆಯಲ್ಲಿ ಮಾತ್ರ ಕರೆಂಟ್ ಇರೋದಿಲ್ಲ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎನ್ನುತ್ತಾರೆ ರೋಗಿಗಳು.

Comments

Leave a Reply

Your email address will not be published. Required fields are marked *