ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

ದಾವಣಗೆರೆ: ಗಾಂಧಿನಗರದ ಚೌಡೇಶ್ವರಿ ನಗರದಲ್ಲಿ ಪೋಷಕರು ತಮ್ಮ ಮಾನಸಿಕ ಅಸ್ವಸ್ಥ ಮಗನನ್ನು ಪ್ರಾಣಿಯಂತೆ ಕಟ್ಟಿ ಹಾಕಿದ ವಿಚಾರ ಬೆಳಕಿಗೆ ಬಂದಿದೆ.

ಪೋಷಕರಾದ ಉಚ್ಚಂಗಪ್ಪ, ರೇಣುಕಮ್ಮ ತಮ್ಮ ಮಗನಾದ ರಘು(18)ವನ್ನು ಸರಪಳಿಯಿಂದ ಕಟ್ಟಿಹಾಕಿದ್ದಾರೆ. ರಘು ಮಾನಸಿಕ ಅಸ್ವಸ್ಥನಾಗಿದ್ದು, ಆತ ಸಾರ್ವಜನಿಕರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಜನರ ಮೇಲೆ ಹಲ್ಲೆ ಮಾಡುತ್ತಿದ್ದ.

ಈ ವರ್ತನೆಯಿಂದಾಗಿ ಬೇಸತ್ತ ಪೋಷಕರು ಸುಮಾರು 5 ತಿಂಗಳಿದಲ್ಲೂ ರಘುವಿನ ಕುತ್ತಿಗೆಗೆ ಸರಪಳಿಯನ್ನು ಸುತ್ತಿ ಕಟ್ಟಿಹಾಕಿದ್ದು, ಈಗ ಬೆಳಕಿಗೆ ಬಂದಿದೆ. ರಘುವಿನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತನನ್ನು ಅವರ ಅಜ್ಜಿ ನೋಡಿಕೊಳ್ಳುತ್ತಿದ್ದರು.

Comments

Leave a Reply

Your email address will not be published. Required fields are marked *