ಶಿಕ್ಷಕನ ಪರ ನಿಂತು ಪ್ರಿನ್ಸಿಪಾಲರನ್ನು ತರಾಟೆಗೆ ತೆಗೆದುಕೊಂಡ ಪೋಷಕರು!

ಕೊಪ್ಪಳ: ಶಾಲೆಯಲ್ಲಿ ಗುಂಪುಗಾರಿಕೆ ನಡೆಸುತ್ತಿರುವ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿಯನ್ನು ಪೋಷಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ನಡೆದಿದೆ.

ತಳಕಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕ ಹಾಗೂ ಶಿಕ್ಷಕರ ನಡುವೆ ಗುಂಪುಗಾರಿಕೆಗೆ ರೋಸಿ ಹೋದ ಪೋಷಕರು ಇಂದು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.

ಶಾಲೆಯ ಇಂಗ್ಲೀಷ್ ಶಿಕ್ಷಕ ಚಕ್ರಪಾಣಿಯವರಿಗೆ ಮಾನಸಿಕ ಹಿಂಸೆ ನೀಡುತ್ತಿರುವ ಶಾಲೆಯ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾನಸಿಕವಾಗಿ ನೊಂದ ಶಿಕ್ಷಕ ಚಕ್ರಪಾಣಿ ನೆರವಿಗೆ ಪೋಷಕರು ನಿಂತಿದ್ದು, ಶಾಲೆಯಲ್ಲಿ ಗುಂಪುಗಾರಿಕೆಗೆ ಬೆಂಬಲಿಸುತ್ತಿರುವ ಶಾಲಾ ಪ್ರಿನ್ಸಿಪಾಲರನ್ನು ತೆಗೆದು ಹಾಕುವಂತೆ ಪೋಷಕರು ಆಗ್ರಹಿಸಿದರು. ಗುಂಪುಗಾರಿಕೆ ನಡೆಸುತ್ತಿದ್ದ ಶಾಲಾ ಸಿಬ್ಬಂದಿಗಳ ವಿರುದ್ಧವು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಸಿಬ್ಬಂದಿಗಳ ವರ್ತನೆಯಿಂದ ರೋಸಿಹೋದ ಶಿಕ್ಷಕ ಚಕ್ರಪಾಣಿ ಶಾಲೆಯಲ್ಲೇ ಕಣ್ಣೀರು ಹಾಕಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಸಹ ಕಣ್ಣೀರು ಹಾಕಿದರು.

Comments

Leave a Reply

Your email address will not be published. Required fields are marked *