ಭುನನೇಶ್ವರ: ತನ್ನ ಹೆಸರಿಗೆ ಆಸ್ತಿ ಬರೆದುಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪಾಪಿ ಮಗ ಹೆತ್ತವರನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಈ ಘಟನೆ ಕೊರಾಪುಟ್ ಜಿಲ್ಲೆಯ ಜಯನಗರ ಪ್ರದೇಶದಲ್ಲಿ ಮಾರ್ಚ್ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಲತಿಫ್ ರೆಹಮಾನ್ ಕೃತ್ಯ ಎಸಗಿ ಬಂಧಿತನಾಗಿರುವ ಪಾಪಿ ಮಗ. ಮಗನಿಂದಲೇ ಹತನಾದ ದುರ್ದೈವಿ ತಂದೆಯನ್ನು ಎಂ.ಕೆ ರೆಹಮಾನ್ ಹಾಗೂ ತಾಯಿಯನ್ನು ಫಕಿಝಾ ಬಿಬಿ ಎಂದು ಗುರುತಿಸಲಾಗಿದೆ.

ಹೆತ್ತವರು ತಮ್ಮ ಆಸ್ತಿಯನ್ನು ಮಗನಿಗೆ ಬರೆದು ಕೊಡಲು ನಿರಾಕರಿಸುತ್ತಿದ್ದರು. ಹಲವು ಬಾರಿ ಮಗ ತನ್ನ ಹೆಸರಿಗೆ ಬರೆದುಕೊಡುವಂತೆ ಅಪ್ಪನಲ್ಲಿ ಹೇಳಿದ್ದನು. ಆದ್ರೆ ಪ್ರತಿ ಬಾರಿಯೂ ತಂದೆ ಮಗನ ಮಾತನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಇದರಿಂದ ಸಿಟ್ಟುಗೊಂಡ ಪಾಪಿ ಮಗ ಅಪ್ಪ-ಅಮ್ಮನಿಗೆ ಚೆನ್ನಾಗಿ ಥಳಿಸಿ ಬಳಿಕ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅಲ್ಲದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಎಸ್ ಡಿಪಿಒ ಸಾಗರಿಕಾನಾಥ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply