ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

Shehbaz Sharif

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಎರಡು ದೇಶಗಳಿಗೆ ಯುದ್ಧವು ಆಯ್ಕೆಯಾಗಿಲ್ಲ ಕಾರಣ ಮಾತುಕತೆಯ ಮೂಲಕ ಭಾರತದೊಂದಿಗೆ ಶಾಶ್ವತ ಶಾಂತಿ ಹೊಂದಿಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಕಾಶ್ಮೀರದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ನಿರ್ಧರಿಸುತ್ತದೆ. ಯುಎನ್ ನಿರ್ಣಯದ ಪ್ರಕಾರ ಈ ಪ್ರದೇಶದಲ್ಲಿ ಸುಸ್ಥಿರ ಶಾಂತಿಯು ಕಾಶ್ಮೀರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದೆ. ಪಾಕಿಸ್ತಾನ ಆಕ್ರಮಣಕಾರಿ ಅಲ್ಲ, ಆದರೆ ಇಸ್ಲಾಮಾಬಾದ್ ತನ್ನ ಗಡಿಗಳನ್ನು ರಕ್ಷಿಸಲು ತನ್ನ ಮಿಲಿಟರಿಗೆ ಖರ್ಚು ಮಾಡುತ್ತದೆ ಎಂದು ಹೇಳಿದರು.

ಕಾಶ್ಮೀರ ಸಮಸ್ಯೆ ಹಾಗೂ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಆಗಾಗ ಹದಗೆಡುತ್ತಿವೆ. ಆದರೆ ಯುದ್ಧವು ಎರಡೂ ದೇಶಗಳ ಆಯ್ಕೆಯಾಗಿಲ್ಲದಿದ್ದರಿಂದ ನಾವು ಮಾತುಕತೆ ಮೂಲಕ ಭಾರತದೊಂದಿಗೆ ಶಾಶ್ವತ ಶಾಂತಿಯನ್ನು ಬಯಸುತ್ತೇವೆ ಎಂದರು. ಇದನ್ನೂ ಓದಿ: ಕೊಪ್ಪಳದ ಹುಲಿಹೈದರ್‌ನಲ್ಲಿ ಮತ್ತೆ ಐದು ದಿನ ನಿಷೇಧಾಜ್ಞೆ ಮುಂದುವರಿಕೆ

ಜಮ್ಮು ಮತ್ತು ಕಾಶ್ಮೀರ ಎಂದೆಂದಿಗೂ ದೇಶದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದು ಭಾರತ ಪಾಕಿಸ್ತಾನಕ್ಕೆ ಪದೇ ಪದೇ ಹೇಳುತ್ತಿದೆ. ಇದರ ಜೊತೆಗೆ ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿಯೂ ಭಾರತ ಈಗಾಗಲೇ ಹೇಳಿದೆ. ಇದನ್ನೂ ಓದಿ: ಇಂಧನಕ್ಕಾಗಿ ತಿರುವನಂತಪುರಂನಲ್ಲಿ ಶ್ರೀಲಂಕಾದ 4 ವಿಮಾನಗಳು ಲ್ಯಾಂಡಿಂಗ್

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *