ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

ಕೋಲಾರ: ಉಳುಮೆ ಮಾಡುವ ವೇಳೆ ನಾಯಿಗಳಿಗೆ ಬೆದರಿದ ಎತ್ತುಗಳು ನೇಗಿಲು ಸಹಿತ 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಜೀಡಮಾಕನಪಲ್ಲಿ ಗ್ರಾಮದ ನಿವಾಸಿ ರೈತ ಮುನಿಯಪ್ಪ ಎಂಬವರ ಎತ್ತುಗಳು ಪಾಳು ಬಾವಿಗೆ ಬಿದ್ದು ಗಾಯಗೊಂಡಿವೆ. ಕೆಲವು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದು, ರೈತ ಮುನಿಯಪ್ಪ ಅವರು ಉಳುಮೆ ಮಾಡಲು ತಮ್ಮ ಎತ್ತುಗಳ ಜೊತೆಗೆ ಹೊಲಕ್ಕೆ ಆಗಮಿಸಿದ್ದರು.

ಎತ್ತುಗಳಿಗೆ ನೇಗಿಲು ಕಟ್ಟಿ ಉಳುಮೆ ಮಾಡುವಷ್ಟರಲ್ಲಿ ನಾಯಿಗಳನ್ನು ಕಂಡು ಬೆದರಿದ ಎತ್ತುಗಳು ಓಡಿ ಹೋಗಿ ಹತ್ತಿರದ 30 ಅಡಿ ಪಾಳು ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿವೆ. ಬಾವಿಗೆ ಬಿದ್ದ ಎತ್ತುಗಳನ್ನು ಸ್ಥಳೀಯರ ನೆರವಿನಿಂದ ಮೇಲೆತ್ತಲು ಸಿದ್ಧತೆ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *