ಡೆತ್ ನೋಟ್ ಬರೆದಿಟ್ಟು ಕೆಲಸ ಮಾಡುತ್ತಿದ್ದ ಟೈಲರ್ ಅಂಗಡಿಯಲ್ಲೇ ಮಾಲೀಕ ಆತ್ಮಹತ್ಯೆ!

ಬೆಂಗಳೂರು: ಡೆತ್ ನೋಟ್ ಬರೆದಿಟ್ಟು ತಾನು ಕೆಲಸ ಮಾಡುತ್ತಿದ್ದ ಟೈಲರ್ ಅಂಗಡಿಯಲ್ಲಿ ಮಾಲೀಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಚಿಕ್ಕಬಿದರಕಲ್ಲಿನಲ್ಲಿರುವ ಸಂಜಿತ್ ಟೈಲರ್ ಅಂಗಡಿಯಲ್ಲಿ ನಡೆದಿದೆ.

ಟೈಲರ್ ಸ್ವಾಮಿ ಮೃತ ದುರ್ದೈವಿ. ಸಾಲಗಾರರ ಕಾಟ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಮೃತ ಸ್ವಾಮಿ ಪುತ್ರ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಅಲ್ಲದೆ ಲಕ್ಷ್ಮೀ ವೆಂಕಟೇಶ್ವರ ಅಂಗಡಿಯವರು ಹಣದ ವಿಚಾರದಲ್ಲಿ ಕಾಟ ನೀಡುತ್ತಿದ್ದರು ಎಂದು ಸ್ವಾಮಿ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ.

ಈ ಘಟನೆ ಸಂಬಂಧ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *