ನಂಜನಗೂಡಿನ ಗೋದಾಮಿಯಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ನಾಪತ್ತೆ

ಮೈಸೂರು: ನಂಜನಗೂಡಿನ ಆಹಾರ ಇಲಾಖೆಯ ಗೊದಾಮಿನಲ್ಲಿ ಒಂದು ಸಾವಿರ ಕ್ವಿಂಟಾಲ್ ಅನ್ನ ಭಾಗ್ಯ ಅಕ್ಕಿ ನಾಪತ್ತೆಯಾಗಿದೆ.

ಬೆಂಗಳೂರಿನಿಂದ ಆಹಾರ ಇಲಾಖೆಯ ಗೋದಾಮಿನ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ 50 ಕೆ.ಜಿ.ತೂಕದ 2000 ಮೂಟೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ನಂಜನಗೂಡಿನ ಎ.ಪಿ.ಎಂ.ಸಿ. ಆವರಣದಲ್ಲಿರುವ 5 ನೇ ಗೋದಾಮಿನಲ್ಲಿ ಅಕ್ಕಿ ಮೂಟೆ ನಾಪತ್ತೆಯಾಗಿವೆ.

ನಂಜನಗೂಡು ತಾಲೂಕಿಗೆ ತಿಂಗಳಿಗೆ 22 ಸಾವಿರ ಕ್ವಿಂಟಾಲ್ ಅನ್ನಭಾಗ್ಯದ ಅಕ್ಕಿ ಬಿಡುಗಡೆಯಾಗುತ್ತದೆ. ತಾಲೂಕಿನಲ್ಲಿ ಅಂತ್ಯೋದಯ, ಎಪಿಎಲ್ ಹಾಗೂ ಬಿಪಿಎಲ್ ಸೇರಿದಂತೆ ಒಟ್ಟು 1,06,385 ಪಡಿತರ ಚೀಟಿದಾರರು ಇದ್ದಾರೆ. ಬೆಂಗಳೂರಿನ ಗೊದಾಮಿನಿಂದ ನಂಜನಗೂಡು ಗೊದಾಮಿಗೆ ಬಂದಿರುವ ದಾಖಲೆ ಇದೆ.

ನಂಜನಗೂಡು ಗೊದಾಮಿನಿಂದ ಎಲ್ಲಿಗೆ ವಿತರಣೆ ಆಗಿದೆ ಎಂಬ ದಾಖಲೆಗಳು ಪರಿಶೀಲನೆ ವೇಳೆ ಸಿಕ್ಕಿಲ್ಲ. ನಾಪತ್ತೆಯಾದ ಅಕ್ಕಿ ಮೂಟೆ ಕುರಿತಂತೆ ಮಾಹಿತಿ ನೀಡುವಲ್ಲಿ ವ್ಯವಸ್ಥಾಪಕ ಮೈಲಾರಯ್ಯ ವಿಫಲರಾಗಿದ್ದಾರೆ. ನಾಪತ್ತೆಯಾದ ಅನ್ನಭಾಗ್ಯ ಅಕ್ಕಿ ಬಗ್ಗೆ ಅಧಿಕಾರಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *