ಗಾಂಧಿ ಜಯಂತಿಯಂದೇ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಶಿಕ್ಷಕ

ತುಮಕೂರು: ಗಾಂಧಿ ಜಯಂತಿ ಆಚರಣೆಗೆಂದು ಶಾಲೆಗೆ ಹೊರಟ ಶಿಕ್ಷಕ ಕಂಠ ಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡಿದ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಭೂಪುರ ಸರ್ಕಾರಿ ಶಾಲೆಯ ಶಿಕ್ಷಕ ರಾಮಾಂಜಿಪ್ಪ ಕುಡಿದು ತೂರಾಡಿದ ಶಿಕ್ಷಕ. ಬೆಳಗಿನ ಜಾವ ಎದ್ದ ಶಿಕ್ಷಕ ರಾಮಾಂಜಿನಪ್ಪ ಶಾಲೆಗೆ ಗಾಂಧಿಜಯಂತಿ ಆಚರಣೆ ಮಾಡಲು ಹೊರಟಿದ್ದ. ದಾರಿ ಮಧ್ಯೆ ಮದ್ಯ ಸೇವಿಸಿ ನಡೆದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿದ್ದಾನೆ. ಬಸ್ ಹತ್ತಲೂ ಆಗದೇ ಬಸ್ ನಿಲ್ದಾಣದಲ್ಲೇ ಮಲಗಿದ್ದಾನೆ.

ಬಳಿಕ ಸಾರ್ವಜನಿಕರು ನಶೆ ಏರಿದ ಶಿಕ್ಷಕನ ಮುಖದ ಮೇಲೆ ನೀರು ಸಿಂಪಡಿಸಿ ಎಚ್ಚರಿಸಿದ್ದಾರೆ. ಎಚ್ಚರವಾಗುತಿದ್ದಂತೆ ಕುಡುಕ ಶಿಕ್ಷಕ ಶಾಲೆಗೆ ಹೊರಡದೆ ಮನೆಯತ್ತ ಕಾಲ್ಕಿತಿದ್ದಾನೆ. ಗಾಂಧಿ ಜಯಂತಿಯಂದು ಮಕ್ಕಳಿಗೆ ನೀತಿ ಪಾಠ ಹೇಳಬೇಕಿದ್ದ ಶಿಕ್ಷಕನೇ ಈ ರೀತಿ ಕುಡಿದು ರಸ್ತೆ ಬದಿ ಬಿದ್ದಿದನ್ನು ಕಂಡು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *