ಕೊಠಡಿಯಲ್ಲಿ ಕೂಡಿ ಹಾಕಿ ನರ್ಸ್ ಗೆ ವೈದ್ಯರಿಂದ್ಲೇ ಚಿತ್ರಹಿಂಸೆ, ಕೊಲೆಯತ್ನ!

ಕೊಪ್ಪಳ: ಜಿಲ್ಲೆಯ ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಕೊಲೆಯತ್ನ ಆರೋಪವೊಂದು ಕೇಳಿಬಂದಿದೆ.

ಈ ಆರೋಪ ಮಾಡ್ತಿರೋದು ರೋಗಿಗಳ ಸಂಬಂಧಿಗಳಲ್ಲ ಬದಲಿಗೆ ಅಲ್ಲಿಯೇ ಕೆಲಸ ಮಾಡುತ್ತಿರುವ ನರ್ಸ್ ಸಂಗೀತಾ ಇಟಗಿ. ರಜೆ ವಿಷಯಕ್ಕೆ ನಡೆದ ಜಗಳ ಕೊಲೆಗೆ ಯತ್ನಿಸುವ ಹಂತ ತಲುಪಿದೆಯಂತೆ.

ವೈದ್ಯಾಧಿಕಾರಿ ಡಾ.ಚನ್ನಬಸಯ್ಯ ಹಿರೇಮಠ, ಡಾ.ಮಮತಾ ಹಾಗೂ ನರ್ಸ್ ಗಳಾದ ರೂಪಾ, ಉಷಾ, ರತ್ನ ಸೇರಿಕೊಂಡು ಸಂಗೀತಾಳನ್ನು ಕೊಠಡಿಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿ, ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ರಜೆ ಕೊಡ್ಲಿಲ್ಲ ಅನ್ನೋ ಕೋಪಕ್ಕೆ ಸಂಗೀತಾ ಅಲ್ಲಿನ ಅವ್ಯವಹಾರ ಬಯಲು ಮಾಡಲು ಮುಂದಾಗಿದ್ದರಂತೆ. ಈ ವಿಚಾರದ ತಿಳಿದ ವೈದ್ಯರು, ನನ್ನನ್ನು ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಮೊಬೈಲ್ ಕಸಿದು ಕೆಲ ಫೋಟೋ ಡಿಲೀಟ್ ಮಾಡಿದ್ದಾರೆ. ನನ್ನ ಪತಿ ಬರದೇ ಇದ್ದಿದ್ರೆ ಕೊಲೆ ಮಾಡ್ತಿದ್ರೂ ಅಂತಾ ನರ್ಸ್ ಸಂಗೀತಾ ಆರೋಪಿಸಿದ್ದಾರೆ.

ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಯ ಭರವಸೆ ನೀಡಿದ್ದಾರೆ. ಕುಕನೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ.

Comments

Leave a Reply

Your email address will not be published. Required fields are marked *