ಶ್ವೇತಭವನದಲ್ಲಿ ಪ್ರಧಾನಿಯನ್ನು ಮುಜುಗರದಿಂದ ಪಾರು ಮಾಡಿದ್ರು ಅಜಿತ್ ದೋವಲ್!

ವಾಷಿಂಗ್ಟನ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರಿಗೆ ಆಗುತ್ತಿದ್ದ ಸಂಭಾವ್ಯ ಮುಜುಗರವನ್ನು ತಪ್ಪಿಸಿದ್ದಾರೆ.

ಶ್ವೇತಭವನದ ರೋಸ್ ಗಾರ್ಡನ್ ನಲ್ಲಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಜಂಟಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದರು. ಮೋದಿ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಸಲುವಾಗಿ ಕೆಲವು ಪೇಪರ್‍ಗಳನ್ನು ತಂದಿದ್ದರು.

ಡೊನಾಲ್ಡ್ ಟ್ರಂಪ್ ಮಾತನಾಡುವ ಸಂದರ್ಭದಲ್ಲಿ ಒಮ್ಮೆ ಜೋರಾಗಿ ಗಾಳಿ ಬೀಸಿತು. ಈ ಗಾಳಿಗೆ ಮೋದಿಯವರು ಸಿದ್ಧತೆ ಮಾಡಿದ್ದ ಪೇಪರ್‍ಗಳು ಹಾರಿಹೋಯಿತು. ಕೂಡಲೇ ಅಲ್ಲಿದ್ದ ಅಜಿತ್ ದೋವಲ್ ಮಧ್ಯಪ್ರವೇಶಿಸಿ ಪೇಪರ್‍ಗಳನ್ನು ಹೆಕ್ಕಿ ಮೋದಿಗೆ ನೀಡಿದರು.

ಟ್ರಂಪ್ ಮಾತನಾಡುತ್ತಿರುವಾಗ ಮತ್ತೊಮ್ಮೆ ಗಾಳಿಗೆ ಪೇಪರ್ ಹಾರಿ ಹೋಯ್ತು. ಈ ಸಂದಭದಲ್ಲೂ ಅಜಿತ್ ದೋವಲ್ ಪೇಪರ್ ಗಳನ್ನು ಹೆಕ್ಕಿ ಮೋದಿ ಅವರನ್ನು ರಕ್ಷಿಸಿದರು.

ಇದನ್ನೂ ಓದಿ: ಮೋದಿ ಭೇಟಿ ವೇಳೆ ಟ್ರಂಪ್ ಪತ್ನಿ ಮೆಲಾನಿಯಾ ಧರಿಸಿದ್ದ ಡ್ರೆಸ್ ಬೆಲೆ ಎಷ್ಟು ಗೊತ್ತೆ?

ಇದನ್ನೂ ಓದಿ: ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

&

Comments

Leave a Reply

Your email address will not be published. Required fields are marked *