ಶೋಭಾ ಕರಂದ್ಲಾಜೆಗಿಲ್ಲ ಯಶವಂತಪುರ ವಿಧಾನಸಭೆ ಟಿಕೆಟ್- ಬಿಎಸ್‍ವೈ ಸ್ಪಷ್ಟನೆ

ಬೆಂಗಳೂರು: ಯಶವಂತಪುರ, ಬಾದಾಮಿ ಮತ್ತು ವರುಣಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ ಯಶವಂತಪುರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸ್ತಾರೆ ಅನ್ನೋ ಸುದ್ದಿ ಹಬ್ಬಿದೆ.

ಆದ್ರೆ ಇದೀಗ ಕೇಸರಿ ಸಾರಥಿ ಬಿಎಸ್‍ವೈ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆವರು, ಶೋಭಾ ಕರಂದ್ಲಾಜೆಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಲ್ಲ. ನಾನು ಮತ್ತು ಶ್ರೀರಾಮುಲು ಮಾತ್ರ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇವೆ ಅಂತ ಹೇಳಿದ್ದಾರೆ.

ಬೇರೆ ಯಾವುದೇ ಸಂಸದರಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲ. ಈಗಾಗಲೇ ನಮ್ಮ ಪಾರ್ಟಿ ಒಂದು ಪಾಲಿಸಿ ಮಾಡಿದೆ. ಹಾಗಾಗಿ ಕರಡಿ ಸಂಗಣ್ಣಗೂ ಟಿಕೆಟ್ ಇಲ್ಲ, ಶೋಭಾಗೂ ಇಲ್ಲ. ಯಶವಂತಪುರದಲ್ಲಿ ಶೋಭಾಗೆ ಟಿಕೆಟ್ ಕೊಟ್ಟರೆ 100ರಷ್ಟು ಗೆಲ್ತಾರೆ. ಆದ್ರೆ ಹೈಕಮಾಂಡ್ ನಿರ್ಧಾರ ಮಾಡಿರೋದ್ರಿಂದ ಅವರ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *